ಭೂಗತ ಪಾತಕಿ ಛೋಟಾ ರಾಜನ್ ಸೇರಿದಂತೆ ಪ್ರಕರಣ ಸಂಬಂಧ ಬಂಧಿತರಾಗಿದ್ದ ಒಂಭತ್ತು ಆರೋಪಿಗಳನ್ನು ನ್ಯಾಯಾಲಯ ದೋಷಿಗಳು ಎಂದು ತೀರ್ಪು ನೀಡಿದೆ. ಆರೋಪಿಗಳಾಗಿದ್ದ ಸತೀಶ್ ಕಾಳ್ಯಾ, ಅನಿಲ್ ವಾಗ್ಮೋಡ್, ಅರುಣ್ ದಾಖೆ, ಮಂಗೇಶ್ ಆಗವಾಣೆ, ಸಚಿನ್ ಗಾಯಕ್ವಾಡ್, ಅಭಿಜಿತ್ ಶಿಂಡೆ, ನೀಲೆಶ್ ಶೆಂಗ್ಡೆ, ದೀಪಕ್ ಸಿಸೋಡಿಯಾ ಮುಂತಾದವರು ಶಿಕ್ಷೆಗೊಳಗಾದ ಇತರ ಆರೋಪಿಗಳಾಗಿದ್ದು, ಇದೇ ಪ್ರಕರಣದ ಆರೋಪಿಯಾಗಿದ್ದ ಪತ್ರಕರ್ತ ಜಿಗ್ನಾ ವೋರಾ ಅವರನ್ನು ನ್ಯಾಯಾಲಯ ಸಾಕ್ಷ್ಯಾಧಾರದ ಕೊರತೆ ಹಿನ್ನಲೆಯಲ್ಲಿ ಖುಲಾಸೆಗೊಳಿಸಿದೆ.