ಉತ್ತರಪ್ರದೇಶ ರಾಜ್ಯದ ಕಂದಾಯ ಹಾಗೂ ಪರಿಹಾರ ಆಯುಕ್ತ ಸಂಜಯ್ ಶರ್ಮಾ ಅವರು ಮಾತನಾಡಿ, ದುರ್ಘಟನೆಯಲ್ಲಿ ಮೃತಪಟ್ಟ ಕುಟುಂಬಸ್ಥರಿಗೆ ರೂ.4 ಲಕ್ಷ ಪರಿಹಾರ ನೀಡಲು ಸರ್ಕಾರ ನಿರ್ಧರಿಸಿದ್ದು, ಗಾಯಾಳುಗಳಿಗೆ ರೂ.13,000 ಪರಿಹಾರದ ಜೊತೆಗೆ ಚಿಕಿತ್ಸೆಯ ವೆಚ್ಚಗಳನ್ನು ಭರಿಸಲು ನಿರ್ಧರಿಸಿದೆ. ಶೀಘ್ರಗತಿಯಲ್ಲಿ ಪರಿಹಾರ ಧನ ಜನರಿಗೆ ತಲುಪಲು ಕೆಲಸಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.