ಖ್ಯಾತ ಗಾಯಕ ಅದ್ನಾನ್ ಸಾಮಿ ತಂಡವನ್ನು 'ಇಂಡಿಯನ್ ಡಾಗ್ಸ್' ಎಂದ ಕುವೈತ್ ಅಧಿಕಾರಿಗಳು

ಕುವೈತ್ ವಿಮಾನ ನಿಲ್ದಾಣದಲ್ಲಿ ಖ್ಯಾತ ಗಾಯ ಅದ್ನಾನ್ ಸಾಮಿ ತಂಡವನ್ನು ಕುವೈತ್ ಅಧಿಕಾರಿಗಳು ಇಂಡಿಯನ್ ಡಾಗ್ಸ್ ಎಂದು ಜರಿದಿದ್ದಾಗಿ ಸಾಮಿ ಟ್ವೀಟ್ ಮಾಡಿದ್ದು ಭಾರತೀಯ ರಾಯಭಾರಿ...
ಅದ್ನಾನ್ ಸಾಮಿ
ಅದ್ನಾನ್ ಸಾಮಿ
ಕುವೈತ್: ಕುವೈತ್ ವಿಮಾನ ನಿಲ್ದಾಣದಲ್ಲಿ ಖ್ಯಾತ ಗಾಯ ಅದ್ನಾನ್ ಸಾಮಿ ತಂಡವನ್ನು ಕುವೈತ್ ಅಧಿಕಾರಿಗಳು ಇಂಡಿಯನ್ ಡಾಗ್ಸ್ ಎಂದು ಜರಿದಿದ್ದಾಗಿ ಸಾಮಿ ಟ್ವೀಟ್ ಮಾಡಿದ್ದು ಭಾರತೀಯ ರಾಯಭಾರಿ ಕಚೇರಿಗೆ ಟ್ಯಾಗ್ ಮಾಡಿ ತಿಳಿಸಿದ್ದಾರೆ. 
ಸಾಮಿ ತಮ್ಮ ಟ್ವೀಟ್ ನಲ್ಲಿ ನಾವು ನಿಮ್ಮ ನಗರಕ್ಕೆ ಬಂದಿದ್ದು ಪ್ರೀತಿಯಿಂದ ಮತ್ತು ಭಾರತೀಯ ಸಹೋದರರ ಆಲಿಂಗನಕ್ಕಾಗಿ. ಆದರೆ ನೀವು ಅದಕ್ಕೆ ಸಹಕರಿಸಲಿಲ್ಲ. ಕುವೈತ್ ವಲಸೆ ಅಧಿಕಾರಿಗಳು ಅನುಚಿತವಾಗಿ ನಡೆದುಕೊಂಡರು. ಯಾವುದೇ ಕಾರಣ ಇಲ್ಲದೆ ನಮ್ಮ ತಂಡವನ್ನು ಇಂಡಿಯನ್ ಡಾಗ್ಸ್ ಎಂದು ಜರಿದಿದ್ದಾರೆ. 
ಈ ಬಗ್ಗೆ ಭಾರತೀಯ ರಾಯಭಾರಿ ಕಚೇರಿಗೆ ತಿಳಿಸಿದರೂ ಏನು ಕ್ರಮಕೈಗೊಳ್ಳಲಿಲ್ಲ. ಕುವೈತ್ ನವರಿಗೆ ಎಷ್ಟು ಸೊಕ್ಕಿರಬೇಕು ಎಂದು ಸಾಮಿ ಟ್ವೀಟಿಸಿದ್ದಾರೆ.
ಈ ಬಗ್ಗೆ ಕೇಂದ್ರ ಸಚಿವ ಕಿರಣ್ ರಿಜಿಜು ಸಹ ಪ್ರತಿಕ್ರಿಯಿಸಿ, ಈ ರೀತಿ ಆಗಬಾರದಿತ್ತು. ಅದಕ್ಕೆ ವಿಶಾದಿಸುತ್ತೇವೆ. ನಮ್ಮ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಕೂಡಲೇ ಸಂಪರ್ಕಿಸಿ ಎಂದು ಟ್ವೀಟ್ ನಲ್ಲೇ ತಿಳಿಸಿದರು. ಈ ವಿಚಾರವಾಗಿ ಸುಷ್ಮಾ ಸ್ವರಾಜ್ ಅವರನ್ನು ಸಾಮಿ ಸಂಪರ್ಕಿಸಿದ್ದಾರೆ. 
ಸುಷ್ಮಾ ಸ್ವರಾಜ್ ಅವರೇ ನಿಮ್ಮ ಕಾಳಜಿಗೆ ಧನ್ಯವಾದಗಳು. ಅವರನ್ನು ನಾನು ಸಂಪರ್ಕಿಸಿದೆ. ನಮ್ಮ ತಂಡಕ್ಕೆ ಅವರು ನೆರವಾಗಿದ್ದಾರೆ. ಇಂತಹವರು ನಮ್ಮ ವಿದೇಶಾಂಗ ಸಚಿವರಾಗಿದ್ದಕ್ಕೆ ಹೆಮ್ಮೆ ಪಡುತ್ತಿದ್ದೇನೆ ಎಂದು ರಿಜಿಜು ಟ್ವೀಟ್ ಗೆ ಪ್ರತಿಕ್ರಿಯಿಸಿದ್ದಾರೆ ಸಾಮಿ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com