ಮಧ್ಯಪ್ರದೇಶ: ಹೊತ್ತಿ ಉರಿದ ರಾಜಧಾನಿ ಎಕ್ಸ್'ಪ್ರೆಸ್, ಪ್ರಾಣಾಪಾಯದಿಂದ ಪ್ರಯಾಣಿಕರು ಪಾರು

ರಾಜಧಾನಿ ಎಕ್ಸ್'ಪ್ರೆಸ್'ನ ನಾಲ್ಕು ಬೋಗಿಗಳಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು, ಬೋಗಿಗಳು ಹೊತ್ತು ಉರಿದಿರುವ ಘಟನೆ ಮಧ್ಯಪ್ರದೇಶ ಬಿರ್ಲಾನಗರದಲ್ಲಿ ಸೋಮವಾರ ನಡೆದಿದೆ...
ಮಧ್ಯಪ್ರದೇಶ: ಹೊತ್ತಿ ಉರಿದ ರಾಜಧಾನಿ ಎಕ್ಸ್'ಪ್ರೆಸ್, ಪ್ರಾಣಾಪಾಯದಿಂದ ಪ್ರಯಾಣಿಕರು ಪಾರು
ಮಧ್ಯಪ್ರದೇಶ: ಹೊತ್ತಿ ಉರಿದ ರಾಜಧಾನಿ ಎಕ್ಸ್'ಪ್ರೆಸ್, ಪ್ರಾಣಾಪಾಯದಿಂದ ಪ್ರಯಾಣಿಕರು ಪಾರು
ಗ್ವಾಲಿಯರ್: ರಾಜಧಾನಿ ಎಕ್ಸ್'ಪ್ರೆಸ್'ನ ನಾಲ್ಕು ಬೋಗಿಗಳಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು, ಬೋಗಿಗಳು ಹೊತ್ತು ಉರಿದಿರುವ ಘಟನೆ ಮಧ್ಯಪ್ರದೇಶ ಬಿರ್ಲಾನಗರದಲ್ಲಿ ಸೋಮವಾರ ನಡೆದಿದೆ. 
ಭೋಪಾಲ್-ರಾಜಧಾನಿ ಎಕ್ಸ್ ಪ್ರೆಸ್ ರೈಲು ದೆಹಲಿಯಿಂದ ವಿಶಾಖಪಟ್ಟಣದತ್ತ ಸಾಗುತ್ತಿದ್ದು. ಈ ವೇಳೆ ರೈಲಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. 
ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿರುವ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. 
ರೈಲಿನ ಬಿ-6. ಬಿ-7 ಬೋಗಿಗಳು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಸಾವು-ನೋವುಗಳು ಸಂಭವಿಸಿಲ್ಲ. ಸ್ಥಳಕ್ಕಾಗಮಿಸಿರುವ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com