ಲಖನೌ: ಅಯೋಧ್ಯಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಈ ದೀಪಾವಳಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನಿಮಗೆ ಸಿಹಿ ಸುದ್ದಿ ನೀಡಲಿದ್ದಾರೆ ಎಂದು ಉತ್ತರ ಪ್ರದೇಶ ಬಿಜೆಪಿ ಅಧ್ಯಕ್ಷ ಮಹೇಂದ್ರನಾಥ್ ಪಾಂಡೆ ಅವರು ಶುಕ್ರವಾರ ಹೇಳಿದ್ದಾರೆ.
ಸಿಹಿ ಸುದ್ದಿ ಬಗ್ಗೆ ಹೆಚ್ಚಿನ ವಿವರ ನೀಡಲು ನಿರಾಕರಿಸಿದ ಪಾಂಡೆ ಅವರು, ಸಿಎಂ ಒಬ್ಬ ಮಹಾನ್ ಸಂತರಾಗಿದ್ದು, ಪ್ರಮುಖ ನಿರ್ಧಾರಗಳನ್ನು ಯೋಗಿ ಆದಿತ್ಯನಾಥ್ ಅವರೇ ಪ್ರಕಟಿಸುವುದೇ ಸೂಕ್ತ' ಎಂದರು.
ದೀಪಾವಳಿ ಬರಲಿ. ಅಯೋಧ್ಯಯ ಬಗ್ಗೆ ನಿಮಗೆಲ್ಲ ಸಂತೋಷದ ಸುದ್ದಿ ಸಿಗಲಿದೆ ಎಂದು ಪಾಂಡೆ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಅಯೋಧ್ಯ ರಾಮ ಜನ್ಮಭೂಮಿ ವಿವಾದದಕ್ಕೆ ಸಂಬಂಧಿಸಿದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ 2019ರ ಜನವರಿಗೆ ಮುಂದೂಡಿದ ಎರಡೇ ದಿನಗಳಲ್ಲಿ ಪಾಂಡೆ ಈ ಹೇಳಿಕೆ ನೀಡಿರುವುದು ಹೆಚ್ಚುಮಹತ್ವ ಪಡೆದುಕೊಂಡಿದೆ.