ದೇವಾಲಯ ನಿರ್ಮಾಣಕ್ಕೆ ಕಾನೂನು ಅನುಮೋದನೆಯ ಅಗತ್ಯವಿದೆ. ನ್ಯಾಯಾಲಯದ ಆದೇಶಕ್ಕಾಗಿ ಹಲವು ವರ್ಷಗಳಿಂದಲೂ ಕಾಯುತ್ತಿದ್ದೇವೆ. ಅ.29ಕ್ಕೆ ಆದೇಶ ಹೊರಬೀಳುತ್ತದೆ ಎಂದು ತಿಳಿದಾಗ ಈ ಬಾರಿ ದೀಪಾವಳಿಗೆ ಹಿಂದೂಗಳಿಗೆ ಒಳ್ಳೆಯ ಸುದ್ದಿ ಬರುತ್ತದೆ ಎಂದುಕೊಂಡಿದ್ದೆವು. ಆದರೆ, ಸುಪ್ರೀಂಕೋರ್ಟ್ ಆದೇಶವನ್ನು ಮುಂದೂಡಿದೆ. ಅಲ್ಲದೆ, ತಮ್ಮ ಆದ್ಯತೆ ಬೇರೆಯ ವಿಚಾರಗಳಿಗಿವೆ ಎಂಬುದು ಆದೇಶದಲ್ಲಿ ತಿಳಿಯುತ್ತಿದೆ. ಹಿಂದೂ ಸಮುದಾಯದ ಭಾವನೆಗಳನ್ನು ಪರಿಗಣಿಸಿ ಸುಪ್ರೀಂಕೋರ್ಟ್ ರಾಮ ಜನ್ಮಭೂಮಿ ವಿಚಾರವನ್ನು ಆದಷ್ಟು ಬೇಗ ಇತ್ಯರ್ಥಪಡಿಸಬೇಕು. ಇಲ್ಲದೇ ಹೋದರೆ, ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.