ಪಕ್ಷ ಅಧಿಕಾರಕ್ಕೆ ಬಂದರೆ ಹೈದರಾಬಾದ್ ಹೆಸರು 'ಭಾಗ್ಯನಗರ'ವಾಗಿ ಬದಲಾವಣೆ: ಬಿಜೆಪಿ ಶಾಸಕ

2018ರ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದರೇ ಹೈದರಾಬಾದ್ ಗೆ ಭಾಗ್ಯನಗರ ಎಂದು ಹೆಸರು ಬದಲಾಯಿಸುವುದಾಗಿ ...
ರಾಜಾ ಸಿಂಗ್
ರಾಜಾ ಸಿಂಗ್
ಹೈದರಾಬಾದ್: 2018ರ  ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದರೇ ಹೈದರಾಬಾದ್ ಗೆ ಭಾಗ್ಯನಗರ ಎಂದು ಹೆಸರು ಬದಲಾಯಿಸುವುದಾಗಿ ಘೋಷ ಮಹಲ್ ವಿಧಾನಸಭೆ ಕ್ಷೇತ್ರದ ಬಿಜೆಪಿ ಶಾಸಕ ರಾಜಾ ಸಿಂಗ್ ಹೇಳಿದ್ದಾರೆ.
ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ರಾಜಾಸಿಂಗ್, ಕೇವಲ ಹೈದರಾಬಾದ್ ಮಾತ್ರವಲ್ಲದೇ ಸಿಕಂದರಾಬಾದ್ ಮತ್ತು ಕರೀಮ್ ನಗರಗಳ ಹೆಸರನ್ನು  ಬಿಜೆಪಿ ಬದಲಾವಣೆ ಮಾಡಲಿದೆ ಎಂದು ಹೇಳಿದ್ದಾರೆ.
ಈ ಮೊದಲು ಹೈದರಾಬಾದ್ ಭಾಗ್ಯನಗರವಾಗಿತ್ತು, 1590 ರಲ್ಲಿ ಕ್ವಿಲ್ ಕುತುಬ್ ಷಾ ಆಗಮಿಸಿ ಭಾಗ್ಯನಗರವನ್ನು ಹೈದಾರಾಬಾದ್ ಎಂಬುದಾಗಿ ಬದಲಾಯಿಸಿದ. ಆ ವೇಳೆ ಹಲವು ಹಿಂದಗಳ ಮೇಲೆ ದಾಳಿ ನಡೆಯಿತು, ಹಲವು  ದೇವಾಲಯಗಳು ನಾಶವಾದವು . ಹೀಗಾಗಿ ನಾವು ಹೈದರಾಬಾದ್ ಗೆ ಮರು ನಾಮಕರಣ ಮಾಡುವ ಯೋಜನೆಯಲ್ಲಿದ್ದೇವೆ ಎಂದು ಹೇಳಿದ್ದಾರೆ.
ತೆಲಂಗಾಣದಲ್ಲಿ ಈ ಬಾರಿ ಬಿಜೆಪಿ ಬಹುಮತ ಪಡೆದು ಅಧಿಕಾರ ಹೊಂದಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com