ಯಾವುದೇ ಸವಾಲು ಎದುರಿಸಲು ಭಾರತ ಸಿದ್ಧ: ವಾಯುಪಡೆ ಮುಖ್ಯಸ್ಥ

ಭಾರತೀಯ ವಾಯುಪಡೆ ತುಂಬಾ ಜಾಗೃತವಾಗಿದ್ದು, ಇಂಡೋ ಪೆಸಿಫಿಕ್ ಪ್ರದೇಶದಲ್ಲಿ ಉದ್ಭವಿಸುವ ಯಾವುದೇ ....
ಬಿಎಸ್ ಧನೋವಾ
ಬಿಎಸ್ ಧನೋವಾ
Updated on
ನವದೆಹಲಿ: ಭಾರತೀಯ ವಾಯುಪಡೆ ತುಂಬಾ ಜಾಗೃತವಾಗಿದ್ದು, ಇಂಡೋ ಪೆಸಿಫಿಕ್ ಪ್ರದೇಶದಲ್ಲಿ ಉದ್ಭವಿಸುವ ಯಾವುದೇ ಬೆದರಿಕೆಗಳನ್ನು ಎದುರಿಸಲು ಸಮರ್ಥವಾಗಿದೆ ಎಂದು ವಾಯುಪಡೆ ಮುಖ್ಯಸ್ಥ ಬಿಎಸ್ ಧನೋವಾ ಅವರು ಭಾನುವಾರ ಹೇಳಿದ್ದಾರೆ.
ರಾಷ್ಟ್ರೀಯ ಹಿತಾಸಕ್ತಿ ರಕ್ಷಿಸಲು ಭಾರತೀಯ ವಾಯುಪಡೆ ಯಾವುದೇ ಸವಾಲುಗಳನ್ನು ಎದುರಿಸಲು ಸಂಪೂರ್ಣ ಸಿದ್ಧವಿದೆ ಎಂದು ಧನೋವಾ ಅವರು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ನೆರೆಹೊರೆಯ ರಾಷ್ಟ್ರಗಳು ಸೇನೆಯನ್ನು ಆಧುನಿಕರಣಗೊಳಿಸುತ್ತಿರುವುದು ಮತ್ತು ಹೊಸ ಉಪಕರಣಗಳನ್ನು ಸೇನೆಗೆ ಸೇರ್ಪಡೆ ಮಾಡುತ್ತಿರುವುದು ಕಳವಳಕಾರಿ ವಿಷಯ ಎಂದಿರುವ ಧನೋವಾ ಅವರು, ಆದರೂ ಭಾರತದ ವಾಯುಪಡೆ ಯಾವುದೇ ಬೆದರಿಕೆಯನ್ನು ಪರಿಣಾಮಕಾರಿಯಾಗಿ ಎದುರಿಸುವ ಸಾಮರ್ಥ್ಯ ಹೊಂದಿದೆ ಎಂದು ಹೇಳಿದ್ದಾರೆ.
ಪ್ರಸ್ತುತ ಸವಾಲುಗಳು ಬಗೆಹರಿಸಲಾಗದ ಪ್ರಾದೇಶಿಕ ಸಮಸ್ಯೆಗಳಿಂದ ಹೊರಹೊಮ್ಮುತ್ತಿದ್ದು, ಯಾವುದೇ ಪ್ರಾಯೋಜಿತ ಅಥವಾ ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿ ನಡೆಯುವ ದಾಳಿಯನ್ನು ಎದುರಿಸಲು ಸಿದ್ಧ ಎಂದು ನೇರವಾಗಿ ಚೀನಾ ಮತ್ತು ಪಾಕಿಸ್ತಾನದ ಬೆದರಿಕೆಯನ್ನು ಪ್ರಸ್ತಾಪಿಸದೆ ಧನೋವಾ ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com