ನಿಲಕ್ಕಲ್: ಶಬರಿಮಲೆ ದೇಗುಲ ಪ್ರವೇಶಕ್ಕೆ ಯತ್ನಿಸಿದ ಬಿಜೆಪಿ ನಾಯಕ ಕೆ.ಸುರೇಂದ್ರನ್ ಅವರನ್ನು ಕೇರಳ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಬಂಧಿಸಿದ್ದಾರೆ. ನೀಲಕ್ಕಲ್ ಚೆಕ್ಪೋಸ್ಟ್ ಮೂಲಕ ಶಬರಿಮಲೆ ದೇಗುಲ ಪ್ರವೇಶಕ್ಕೆ ಅವರು ಯತ್ನಿಸಿದ್ದರು.
ರಾತ್ರಿ 7.20ರ ವೇಳೆಗೆ ಅವರನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಇರುಮುಡಿಯೊಂದಿಗೆ ದೇವಾಲಯ ಪ್ರವೇಶಿಸಲು ಯತ್ನಿಸಿದ್ದರು. ನಾನು ಅಯ್ಯಪ್ಪ ಭಕ್ತನಾಗಿ ದೇವಾಲಯ ಪ್ರವೇಶಿಸಿಸಲು ತೆರಳುತ್ತಿರುವುದಾಗಿ ಪೋಲೀಸರಿಗೆ ತಿಳಿಸಿದರು,
ಆದರು ಅವರನ್ನು ಒಳಗೆ ಬಿಡಲು ಒಪ್ಪದ ಪೊಲೀಸರು ಕೆ, ಸುರೇಂದ್ರನ್ ಅವರೊಂದಿಗೆ ಮೂವರನ್ನು ಬಂಧಸಿದ್ದಾರೆ.