ಉನ್ನಾವೋದಿಂದ ಚುನಾವಣೆಗೆ ಸ್ಪರ್ಧಿಸುವಂತೆ ರಾಹುಲ್ ಗಾಂಧಿಗೆ ಸಾಕ್ಷಿ ಮಹಾರಾಜ್ ಸವಾಲು !

ಉತ್ತರ ಪ್ರದೇಶದ ಉನ್ನಾವೋ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸ್ಪರ್ಧಿಸುವಂತೆ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಸವಾಲು ಎಸೆದಿದ್ದಾರೆ.
ಸಾಕ್ಷಿ ಮಹಾರಾಜ್, ರಾಹುಲ್ ಗಾಂಧಿ
ಸಾಕ್ಷಿ ಮಹಾರಾಜ್, ರಾಹುಲ್ ಗಾಂಧಿ

ಉನ್ನಾವೋ:  ಉತ್ತರ ಪ್ರದೇಶದ ಉನ್ನಾವೋ ಲೋಕಸಭಾ ಕ್ಷೇತ್ರದಿಂದ  ಚುನಾವಣೆಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸ್ಪರ್ಧಿಸುವಂತೆ  ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಸವಾಲು ಎಸೆದಿದ್ದಾರೆ.

ಉನ್ನಾವೋ ಕ್ಷೇತ್ರದಿಂದ ರಾಹುಲ್ ಗಾಂಧಿ ಗೆಲುವು ಸಾಧಿಸಿದರೆ ತಾವು ರಾಜಕೀಯ ತೊರೆಯುವುದಾಗಿ  ಹೇಳಿರುವ ಮಹಾರಾಜ್ ಒಂದು ವೇಳೆ ಈ ಚುನಾವಣೆಯಲ್ಲಿ ರಾಹುಲ್ ಗಾಂಧಿ ಸೋತರೆ ದೇಶವನ್ನು ತೊರೆದು ಇಟಲಿಗೆ ಹೋಗಬೇಕು ಎಂದು  ಹೇಳಿದ್ದಾರೆ.

ನೆಹರೂ ವಂಶದ ಕುಡಿ ದೇಶದ ಯಾವುದೇ ಭಾಗದಲ್ಲೂ ಸ್ಪರ್ಧಿಸಿದ್ದರೂ ಗೆಲುವು ಸಾಧಿಸುವುದಿಲ್ಲ. 2014 ರ ಚುನಾವಣೆಯಂತೆ 2019ರ ಚುನಾವಣೆಯಲ್ಲೂ  ಬಿಜೆಪಿ ಅಧಿಕ ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಕೇಂದ್ರದಲ್ಲಿ ಅಧಿಕಾರವನ್ನು ಮತ್ತೆ ಹಿಡಿಯಲಿದೆ.  ನರೇಂದ್ರ ಮೋದಿ ಅವರೇ ಇನ್ನೊಮ್ಮೆ ಪ್ರಧಾನಿಯಾಗಲಿದ್ದಾರೆ ಎಂದು ಸಾಕ್ಷಿ ಮಹಾರಾಜ್ ಭವಿಷ್ಯ ನುಡಿದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com