ಕೇಂದ್ರಕ್ಕೆ ಮನವಿ ಸಲ್ಲಿಕೆ ಮಾಡುವುದಕ್ಕೂ ಮುನ್ನ ನಷ್ಟ ಕುರಿತಂತೆ ಮಾಹಿತಿ ನೀಡಿರುವ ಸರ್ಕಾರ, ಚಂಡಮಾರುತದಿಂದಾಗಿ ರೂ.2,765 ನಷ್ಟ ಎದುರಾಗಿದ್ದು, 60.11 ಲಕ್ಷ ಜನರ ಮೇಲೆ ಗಂಭೀರ ಪರಿಣಾಮ ಬೀರಿದೆ. 2.6 ಲಕ್ಷ ಹೆಕ್ಟೇರ್ ಗಳಷ್ಟು ಕೃಷಿ ನಾಶವಾಗಿದೆ. 56,930 ಮನೆಗಳು ನಾಶವಾಗಿದೆ. ಹಾಗೂ 34,951 ದೇಶೀ ಪ್ರಾಣಿಗಳು ಸಾವನ್ನಪ್ಪಿವೆ ಎಂದು ತಿಳಿಸಿದೆ.