ರೈಲ್ವೆ ಹಳಿ ಸಮೀಪದ ಮೈದಾನದಲ್ಲಿ ದಸರಾ ಪ್ರಯುಕ್ತ ರಾವಣ ದಹನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ರಾವಣನಿಗೆ ಬೆಂಕಿ ಹಚ್ಚಿ ಪಟಾಕಿ ಸಿಡಿಯಲು ಆರಂಭಿಸಿದಾಗ ದೂರದಲ್ಲಿ ನಿಂತಿದ್ದ ಜನ ರೈಲ್ವೆ ಹಳಿ ಬಳಿ ಬಂದಿದ್ದರು. ಈ ವೇಳೆ ಎರಡೂ ದಿಕ್ಕಿನಿಂದಲೂ ರೈಲೂ ವೇಗವಾಗಿ ಆಗಮಿಸಿದೆ. ಆದರೆ, ಪಟಾಕಿ ಸದ್ದಿನಿಂದ ರೈಲು ಬಂದಿದ್ದು, ಜನರಿಗೆ ತಿಳಿದೇ ಇಲ್ಲ. ಹಳಿ ಮೇಲೆ ನಿಂತಿದ್ದ ಜನರ ಎರಡೂ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾರೆ.