ಸೇಲಂ: 13 ವರ್ಷದ ಬಾಲಕಿಯೊಬ್ಬಳ ರುಂಡ ಕಡಿದ ದುಷ್ಕರ್ಮಿಯೊಬ್ಬ, ರುಂಡವನ್ನು ರಸ್ತೆಗೆ ಎಸೆದಿರುವ ಘಟನೆ ತಮಿಳುನಾಡಿನಲ್ಲಿ ಸೋಮವಾರ ನಡೆದಿದೆ.
ರಾಜಲಕ್ಷ್ಮೀ (13) ಮೃತ ಬಾಲಕಿ ಎಂದು ಹೇಳಲಾಗುತ್ತಿದೆ. ತಲವೈಪತ್ತಿ ನಿವಾಸಿಯಾಗಿರುವ ಬಾಲಕಿ ಸ್ಥಳೀಯ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದಳು. ಪ್ರತೀನಿತ್ಯ ಬಾಲಕಿಯನ್ನು ನೆರೆಮನೆಯಾದ ದಿನೇಶ್ ಕುಮಾರ್ ಎಂಬಾತ ಚುಡಾಯಿಸುತ್ತಿದ್ದ.
ಇದರಂತೆ ಸೋಮವಾರ ಕಂಠಪೂರ್ತಿ ಕುಡಿದಿದ್ದ ದಿನೇಶ್ ಬಾಲಕಿ ಮನೆಯಲ್ಲಿ ಯಾರೂ ಇಲ್ಲದ್ದನ್ನು ನೋಡಿಕೊಂಡು ಮನೆಯೊಳಗೆ ನುಗ್ಗಿ, ಮತ್ತೆ ಚುಡಾಯಿಸಲು ಆರಂಭಿಸಿದ್ದಾನೆ. ಈ ವೇಳೆ ಜೋರಾಗಿ ಕೂಗಾಡಿದ್ದಾಳೆ.
ಬಾಲಕಿಯ ತಾಯಿ ಮನೆಗೆ ಬರುತ್ತಿದ್ದನ್ನು ನೋಡಿದ ದುಷ್ಕರ್ಮಿ, ಶಸ್ತ್ರಾಸ್ತ್ರ ತೆಗೆದುಕೊಂಡು ಬಾಲಕಿಯ ರುಂಡವನ್ನು ಕತ್ತರಿಸಿ, ರಸ್ತೆಯಲ್ಲಿ ಬಿಸಾಡಿದ್ದಾನೆ.
ಅತ್ತೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಘಟನೆ ವೇಳೆ ದಿನೇಶ್ ಪಾನಮತ್ತನಾಗಿದ್ದು, ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.