ಅಸ್ಸಾಂ: ಬ್ರಹ್ಮಪುತ್ರ ನದಿಯಲ್ಲಿ ಪ್ರಯಾಣಿಕರ ದೋಣಿ ಮುಳುಗಡೆ, 27 ಮಂದಿ ನಾಪತ್ತೆ

ಸುಮಾರು 45 ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಯಾಂತ್ರೀಕೃತ ದೋಣಿ ಬ್ರಹ್ಮಪುತ್ರ ನದಿಯಲ್ಲಿ ಮುಳುಗಿದ ಘಟನೆ ಅಸ್ಸಾಂನ ಗೌಹಾಟಿಯಲ್ಲಿ ನಡೆದಿದೆ.
ಅಸ್ಸಾಂ: ಬ್ರಹ್ಮಪುತ್ರ ನದಿಯಲ್ಲಿ ಪ್ರಯಾಣಿಕರ ದೋಣಿ ಮುಳುಗಡೆ, 27 ಮಂದಿ ನಾಪತ್ತೆ
ಅಸ್ಸಾಂ: ಬ್ರಹ್ಮಪುತ್ರ ನದಿಯಲ್ಲಿ ಪ್ರಯಾಣಿಕರ ದೋಣಿ ಮುಳುಗಡೆ, 27 ಮಂದಿ ನಾಪತ್ತೆ
ಗೌಹಾಟಿ: ಸುಮಾರು 45 ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಯಾಂತ್ರೀಕೃತ ದೋಣಿ  ಬ್ರಹ್ಮಪುತ್ರ ನದಿಯಲ್ಲಿ ಮುಳುಗಿದ ಘಟನೆ ಅಸ್ಸಾಂನ ಗೌಹಾಟಿಯಲ್ಲಿ ನಡೆದಿದೆ.
ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಇದುವರೆಗೆ ಸುಮಾರು 15 ಪ್ರಯಾಣಿಕರನ್ನು ರಕ್ಷಿಸಲಾಗಿದೆ.ಎನ್ ಡಿ ಆರ್ ಎಫ್ ಹಾಗೂ ಎಸ್ ಡಿ ಆರ್ ಎಫ್ ಸೇರಿ ರಕ್ಷಣಾ ಪಡೆಗಳು ಘಟನಾ ಸ್ಥಳಕ್ಕೆ ದೌಡಾಯಿಸಿ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿವೆ. ಕನಿಷ್ಟ 27 ಮಂದಿ ಕಾಣೆಯಾಗಿದ್ದಾರೆ.
ಉತ್ತರ ಗೌಹಾಟಿಯಿಂದ ಗೌಹಾಟಿ ನಗರಕ್ಕೆ ಸಾಮಾನ್ಯವಾಗಿ ಬಳಸುತ್ತಿದ್ದ ಜಲಮಾರ್ಗದಲ್ಲಿಯೇ ಬೋಟ್ ಸಾಗುತ್ತಿತ್ತು. ಬೋಟ್ ನಲ್ಲಿ ಹೆಚ್ಚಿನ ಸಮ್ಖ್ಯೆಯಲ್ಲಿ ಶಾಲಾ ಮಕ್ಕಳು, ಮಹಿಳೆಯರೇ ಇದ್ದರು ಎಂದು ತಿಳಿದು ಬಂದಿದೆ.
ಕಾಮರೂಪ ಮೆಟ್ರೋ ಜಿಲ್ಲೆಯ ಕಲೆಕ್ಟರ್ ವೀರೇಂದ್ರ ಮಿತ್ತಲ್ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.
ಒಟ್ಟು 22 ಪ್ರಯಾಣಿಕರಿಮಾತ್ರ ಅಧಿಕೃತ ಟಿಕೆಟ್ ನೀಡಲಾಗಿತ್ತು. ಆದರೂ ಬೋಟ್ ನಲ್ಲಿ 18 ಮೋಟಾರು ಸೈಕಲ್ ಗಳನ್ನು ಸಹ ಸಾಗಿಸಲಾಗುತ್ತಿತ್ತುಎಂದು ಪಿಟಿಐ ವರದಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com