ದೇಶ
ಲಂಚಕ್ಕೆ ಬೇಡಿಕೆ: ಆಯುಷ್ ಸಚಿವಾಲಯದ ಅಧಿನ ಕಾರ್ಯದರ್ಶಿ ಬಂಧಿಸಿದ ಸಿಬಿಐ
ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆಯುಷ್ ಸಚಿವಾಲಯದ ಅಧಿನ ಕಾರ್ಯದರ್ಶಿ ಆರ್ ಕೆ ಖತ್ರಿ ಅವರನ್ನು ಶುಕ್ರವಾರ...
ನವದೆಹಲಿ: ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆಯುಷ್ ಸಚಿವಾಲಯದ ಅಧಿನ ಕಾರ್ಯದರ್ಶಿ ಆರ್ ಕೆ ಖತ್ರಿ ಅವರನ್ನು ಶುಕ್ರವಾರ ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.
ಬಾಕಿ ಬಿಲ್ ಗಳನ್ನು ಕ್ಲೀಯರ್ ಮಾಡಲು ವ್ಯಕ್ತಿಯೊಬ್ಬರಿಗೆ 10 ಲಕ್ಷ ರುಪಾಯಿ ಲಂಚಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ಖತ್ರಿ ಅವರನ್ನು ಬಂಧಿಸಲಾಗಿದೆ.
ವ್ಯಕ್ತಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಸಿಬಿಐ ಅಧಿಕಾರಿಗಳು ಅಧಿನ ಕಾರ್ಯದರ್ಶಿಯ ಕಚೇರಿ ಮತ್ತು ನಿವಾಸಗಳ ಮೇಲೆ ದಾಳಿ ನಡೆಸಿದ್ದು, ತನಿಖೆ ಪ್ರಗತಿಯಲ್ಲಿದೆ.