ಜೆಟ್ ಏರ್ವೇಸ್'ನಲ್ಲಿ ತಾಂತ್ರಿಕ ದೋಷ ಪ್ರಕರಣ: ವರದಿ ಕೇಳಿದ ವಿಮಾನಯಾನ ಸಚಿವಾಲಯ

ವಿಮಾನ ಸಿಬ್ಬಂದಿಯ ಮಾಡಿದ ಅಚಾತುರ್ಯದಿಂದ ಜೆಟ್ ಏರ್ವೇಸ್ ನಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷ ಪ್ರಕರಣ ಕುರಿತಂತೆ ವಿಮಾನಯಾನ ಸಚಿವಾಲಯ ಗುರುವಾರ ವರದಿ ಕೇಳಿದೆ...
ನವದೆಹಲಿ: ವಿಮಾನ ಸಿಬ್ಬಂದಿಯ ಮಾಡಿದ ಅಚಾತುರ್ಯದಿಂದ ಜೆಟ್ ಏರ್ವೇಸ್ ನಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷ ಪ್ರಕರಣ ಕುರಿತಂತೆ ವಿಮಾನಯಾನ ಸಚಿವಾಲಯ ಗುರುವಾರ ವರದಿ ಕೇಳಿದೆ. 
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸಚಿವಾಲಯ ಘಟನೆ ವೇಳೆ ಕರ್ತವ್ಯದಲ್ಲಿದ್ದ ಎಲ್ಲಾ ಸಿಬ್ಬಂದಿಗಳು ಪ್ರಮುಖವಾಗಿ ವಿಮಾನದಲ್ಲಿದ್ದ ಸಿಬ್ಬಂದಿಗಳ ಕುರಿತಂತೆ, ಘಟನೆಯ ಸಂಪೂರ್ಣ ವರದಿಗಳನ್ನು ಸಲ್ಲಿಸುವಂತೆ ವಿಮಾನಯಾನ ಡಿಜಿಗೆ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ. 
ಈ ಹಿಂದೆ ಹೇಳಿಕೆ ನೀಡಿದ್ದ ಡಿಜಿಸಿಎ, ವಿಮಾನ ಅಪಘಾತ ತನಿಖಾ ದಳ (ಎಎಐಬಿ) ತನಿಖೆ ಆರಂಭಿಸಿದೆ ಎಂದು ಹೇಳಿತ್ತು. 
ಈ ನಡುವೆ ವಿಮಾನಯಾನ ಸಚಿವಾಲಯದ ಸಚಿವ ಸುರೇಶ್ ಪ್ರಭು ಅವರು, ಎಲ್ಲಾ ನಿಗದಿತ ಏರ್ಲೈನ್ಸ್ ಹಾಗೂ ವಿಮಾನ ನಿಲ್ದಾಣಗಳಲ್ಲಿ ಸುರಕ್ಷತಾ ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com