ತಮಿಳುನಾಡು: ಕಾಂಚೀಪುರಂನಲ್ಲಿ ಸ್ಫೋಟ: ಒಬ್ಬರು ದುರ್ಮರಣ, ಐವರಿಗೆ ಗಾಯ

ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯಲ್ಲಿ  ಸಂಭವಿಸಿರುವ ಸ್ಫೋಟದಲ್ಲಿ  ಒಬ್ಬರು ದುರ್ಮರಣ ಹೊಂದಿದ್ದು, ಐವರು ಗಾಯಗೊಂಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಚೆನ್ನೈ: ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯಲ್ಲಿ  ಸಂಭವಿಸಿರುವ ಸ್ಫೋಟದಲ್ಲಿ  ಒಬ್ಬರು ದುರ್ಮರಣ ಹೊಂದಿದ್ದು, ಐವರು ಗಾಯಗೊಂಡಿದ್ದಾರೆ.

ದೇವಾಲಯದ ಕೊಳವೊಂದರಲ್ಲಿ ಪತ್ತೆಯಾದ ಅಪರಿಚಿತ ವಸ್ತುವೊಂದು ಇದ್ದಕ್ಕಿದ್ದಂತೆ ಸ್ಫೋಟಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.  ಆದರೆ, ಇದಕ್ಕೂ ಉಗ್ರರ ಭೀತಿಗೂ ಸಂಪರ್ಕವಿಲ್ಲ ಎಂಬುದಾಗಿ ಅವರು ಸ್ಪಷ್ಟಪಡಿಸಿದ್ದಾರೆ. 

ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಬಾಂಬ್ ನಿರೋಧಕ ಸಿಬ್ಬಂದಿ ತಪಾಸಣೆ ನಡೆಸಿದ್ದು, ಇದೊಂದು ಸ್ಫೋಟಕ ವಸ್ತು ಎಂಬುದನ್ನು ದೃಢಪಡಿಸಿದ್ದಾರೆ. 

ಮನಂಪತಿಯಲ್ಲಿ ದೇವಾಲಯ ಬಳಿಯ ಕೊಳದಲ್ಲಿ ಪತ್ತೆಯಾದ ವಸ್ತುವನ್ನು ಹೊರಗೆ ತೆಗೆಯಲು ಪ್ರಯತ್ನಿಸಿದ ಯುವಕ ಮೃತಪಟ್ಟಿದ್ದಾನೆ. ಐವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಇದ್ದಕ್ಕಿದ್ದಂತೆ ಸ್ಫೋಟದ ಶಬ್ದ ಕೇಳಿ ಶಾಕ್ ಆಯಿತು. ಆದರೆ, ಇಲ್ಲಿ ಬಂದು ನೋಡಿದಾಗ ಇದು ಬೇರೆ ರೀತಿಯ ಸ್ಫೋಟವಾಗಿತ್ತು. ಗಾಯಾಗಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com