ದೆಹಲಿ: ದುರಂತಕ್ಕೀಡಾಗಿದ್ದ ಅನಜ್ ಮಂಡಿ ಕಟ್ಟಡದಲ್ಲಿ ಮತ್ತೆ ಅಗ್ನಿ ಅವಘಡ
ದೆಹಲಿ: ದುರಂತಕ್ಕೀಡಾಗಿದ್ದ ಅನಜ್ ಮಂಡಿ ಕಟ್ಟಡದಲ್ಲಿ ಮತ್ತೆ ಅಗ್ನಿ ಅವಘಡ

ದೆಹಲಿ: ದುರಂತಕ್ಕೀಡಾಗಿದ್ದ ಅನಜ್ ಮಂಡಿ ಕಟ್ಟಡದಲ್ಲಿ ಮತ್ತೆ ಅಗ್ನಿ ಅವಘಡ

ರಾಷ್ಟ್ರ ರಾಜಧಾನಿ ದೆಹಲಿಯ ಅನಜ್ ಮಂಡಿ ಕಟ್ಟಡಲ್ಲಿ ಭಾನುವಾರ ಅಗ್ನಿ ದುರಂತ ಸಂಭವಿಸಿ 43 ಮಂದಿ ಸಾವಿಗೀಡಾಗಿದ್ದರು. ಇದೀಗ ಮತ್ತದೇ ಕಟ್ಟಡದಲ್ಲಿ ಸೋಮವಾರ ಅಗ್ನಿ ಅವಘಡ ಸಂಭವಿಸಿದೆ. 
Published on

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಅನಜ್ ಮಂಡಿ ಕಟ್ಟಡಲ್ಲಿ ಭಾನುವಾರ ಅಗ್ನಿ ದುರಂತ ಸಂಭವಿಸಿ 43 ಮಂದಿ ಸಾವಿಗೀಡಾಗಿದ್ದರು. ಇದೀಗ ಮತ್ತದೇ ಕಟ್ಟಡದಲ್ಲಿ ಸೋಮವಾರ ಅಗ್ನಿ ಅವಘಡ ಸಂಭವಿಸಿದೆ. 

ಮೂರು ದಿನಗಳಲ್ಲಿ ಇದೇ ಕಟ್ಟಡಲ್ಲಿ ಒಟ್ಟು ಮೂರು ಬಾರಿ ಅಗ್ನಿ ಅವಘಡ ಸಂಭವಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಅಗ್ನಿ ಅವಘಡ ಸಂಭವಿಸಿದ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿರುವ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ. ಘಟನೆಯಲ್ಲಿ ಯಾವುದೇ ರೀತಿಯ ಸಾವು-ನೋವುಗಳು ಸಂಭವಿಸಿರುವುದಾಗಿ ವರದಿಗಳಾಗಿಲ್ಲ. 

ನಿನ್ನೆಯಷ್ಟೇ ದೆಹಲಿ ಅನಜ್ ಮಂಡಿ ಕಟ್ಟಡದಲ್ಲಿ ಘೋರ ಅಗ್ನಿ ದುರಂತ ಸಂಭವಿಸಿತ್ತು. ದುರಂತದಲ್ಲಿ 43 ಮಂದಿ ಕಾರ್ಮಿಕರು ದುರ್ಮರಣವನ್ನಪ್ಪಿದ್ದರು. ಘಟನೆ ಸಂಭವಿಸುತ್ತಿದ್ದಂತೆಯೇ 30 ವಾಹನಗಳಲ್ಲಿ ಬಂದ 150 ಅಗ್ನಿಶಾಮಕ ಸಿಬ್ಬಂದಿ ಪ್ರಾಣದ ಹಂಗು ತೊರೆದು ಕಾರ್ಯಾಚರಣೆ ನಡೆಸಿ 63 ಕಾರ್ಮಿಕರನ್ನು ಕಟ್ಟಡದಿಂದ ಹೊರಗೆ ತರುವ ಮೂಲಕ ಅವರ ಪ್ರಾಣ ರಕ್ಷಿಸಿದ್ದರು. ರಕ್ಷಣಾ ಕಾರ್ಯಾಚರಣೆ ವೇಳೆ ಇಬ್ಬರು ಅಗ್ನಿಶಾಮಕ ದಳದ ಸಿಬ್ಬಂದಿಗಳೂ ಸೇರಿ ಹಲವರಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com