ಕೋಲ್ಕತ್ತಾ ರ್ಯಾಲಿ ಹಿನ್ನೆಲೆ ಪ್ರತಿ ಪ್ರಮೆಗಳಿಗೂ ಕಾವಲುಗಾರನನ್ನು ನೇಮಿಸಲಿರುವ ಬಿಜೆಪಿ! 

ಈಶ್ವರ್ ಚಂದ್ರ ವಿದ್ಯಾಸಾಗರ್ ಅವರ ಪ್ರತಿಮೆ ವಿರೂಪಗೊಳಿಸಿದ ಘಟನೆ ನಡೆದ ನಂತರ ಬಿಜೆಪಿ ಕೋಲ್ಕತ್ತಾದಲ್ಲಿ ನಡೆಯಲಿರುವ ರ್ಯಾಲಿ ಹಿನ್ನೆಲೆಯಲ್ಲಿ ಪ್ರತಿ ಪ್ರತಿಮೆಗಳಿಗೂ ಓರ್ವ ಕಾವಲುಗಾರನನ್ನು ನಿಯೋಜನೆ ಮಾಡಿದೆ. 
ಕೋಲ್ಕತ್ತಾ ರ್ಯಾಲಿ ಹಿನ್ನೆಲೆ ಪ್ರತಿ ಪ್ರಮೆಗಳಿಗೂ ಕಾವಲುಗಾರನನ್ನು ನೇಮಿಸಲಿರುವ ಬಿಜೆಪಿ!
ಕೋಲ್ಕತ್ತಾ ರ್ಯಾಲಿ ಹಿನ್ನೆಲೆ ಪ್ರತಿ ಪ್ರಮೆಗಳಿಗೂ ಕಾವಲುಗಾರನನ್ನು ನೇಮಿಸಲಿರುವ ಬಿಜೆಪಿ!
Updated on

ಕೋಲ್ಕತ್ತಾ: ಈಶ್ವರ್ ಚಂದ್ರ ವಿದ್ಯಾಸಾಗರ್ ಅವರ ಪ್ರತಿಮೆ ವಿರೂಪಗೊಳಿಸಿದ ಘಟನೆ ನಡೆದ ನಂತರ ಬಿಜೆಪಿ ಕೋಲ್ಕತ್ತಾದಲ್ಲಿ ನಡೆಯಲಿರುವ ರ್ಯಾಲಿ ಹಿನ್ನೆಲೆಯಲ್ಲಿ ಪ್ರತಿ ಪ್ರತಿಮೆಗಳಿಗೂ ಓರ್ವ ಕಾವಲುಗಾರನನ್ನು ನಿಯೋಜನೆ ಮಾಡಿದೆ. 

ಪಶ್ಚಿಮ ಬಂಗಾಳದ ಐತಿಹಾಸಿಕ ಪ್ರತಿಮೆಗಳಿಗೆ ಬಿಜೆಪಿ ಒಟ್ಟು 200 ಕಾವಲುಗಾರರನ್ನು ನಿಯೋಜನೆ ಮಾಡಿದೆ. ಸುಮಾರು 85 ವಾಕಿ ಟಾಕಿಗಳನ್ನು ಕಾವಲು ಕಾರ್ಯಕರ್ತರಿಗೆ ನೀಡಲಾಗಿದ್ದು ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಿಯಂತ್ರಣವಾಗಲಿದೆ. 

ಕಳೆದ ಬಾರಿ ಅಮಿತ್ ಶಾ ಅವರ ರೋಡ್ ಶೋ ವೇಳೆ ಈಶ್ವರ್ ಚಂದ್ರ ವಿದ್ಯಾಸಾಗರ್ ಪ್ರತಿಮೆ ವಿರೂಪಗೊಂಡ ನಂತರ ಬಿಜೆಪಿ ಈ ಬಾರಿ ಪ್ರತಿಮೆಗಳನ್ನು ರಕ್ಷಿಸಲು ತಾನೇ ಮುಂದಾಗಿದೆ. 

ಕಳೆದ ಬಾರಿ ನಡೆದ ಪ್ರತಿಮೆ ವಿರೂಪದ ಘಟನೆಗೆ ಟಿಎಂಸಿ ಕಾರ್ಯಕರ್ತರ ಪಡೆ ಕಾರಣ, ಆದ್ದರಿಂದ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಜು ಬ್ಯಾನರ್ಜಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com