ಜಾವೇದ್ ಅಖ್ತರ್ - ಶಬನಾ ಆಜ್ಮಿ
ಜಾವೇದ್ ಅಖ್ತರ್ - ಶಬನಾ ಆಜ್ಮಿ

ಪುಲ್ವಾಮ ಉಗ್ರ ದಾಳಿ: ಕರಾಚಿ ಕಲಾ ಉತ್ಸವದಲ್ಲಿ ಭಾಗವಹಿಸದಿರಲು ಶಬಾನಾ, ಜಾವೇದ್‌ ಅಖ್ತರ್ ನಿರ್ಧಾರ

ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರು ಸಿಆರ್ ಪಿಎಫ್ ಬಸ್ ಮೇಲೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಹಿರಿಯ ನಟಿ, ರಾಜಕಾರಣಿ ಶಬಾನಾ ಆಜ್ಮಿ ಹಾಗೂ...
ಮುಂಬೈ: ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರು ಸಿಆರ್ ಪಿಎಫ್ ಬಸ್ ಮೇಲೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಹಿರಿಯ ನಟಿ ಶಬಾನಾ ಆಜ್ಮಿ ಹಾಗೂ ಅವರ ಪತಿ, ಕವಿ, ರಾಜಕಾರಣಿ ಜಾವೇದ್ ಅಖ್ತರ್ ಅವರು ಕರಾಚಿಯ ಕಲಾ ಉತ್ಸವದಲ್ಲಿ ಭಾವಹಿಸದಿರಲು ನಿರ್ಧರಿಸಿದ್ದಾರೆ.
"ನಾನು, ನನ್ನ ಪತಿ ಗೀತ ರಚನಕಾರ-ಲೇಖಕ ಜಾವೇದ್‌ ಅಖ್ತರ್, ಕರಾಚಿಯಲ್ಲಿ ನಡೆಯಲಿರುವ ಕೈಫಿ ಆಜ್ಮಿ ಜನ್ಮ ಶತಮಾನೋತ್ಸವ ಕಾರ್ಯಕ್ರಮಗಳಿಗೆ ಹೋಗದಿರಲು ನಿರ್ಧರಿಸಿದ್ದೇವೆ'' ಎಂದು ಶಬನಾ ಅಜ್ಮಿ ಅವರು ಹೇಳಿದ್ದಾರೆ. 
ಕರಾಚಿಯ ಕಲಾ ಪರಿಷತ್ತು ಈ ದಂಪತಿಯನ್ನು ಎರಡು ದಿನಗಳ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಹ್ವಾನಿಸಿತ್ತು. ಪುಲ್ವಾಮದಲ್ಲಿನ ಉಗ್ರ ದಾಳಿಯನ್ನು ಬಲವಾಗಿ ಖಂಡಿಸಿರುವ ಶಬಾಮಾ ಆಜ್ಮಿ, 'ನಾವು ದುಃಖತಪ್ತ ಯೋಧರ ಕುಟುಂಬದೊಂದಿಗೆ ಇದ್ದೇವೆ' ಎಂದು ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com