ಮಾಯಾವತಿ
ಮಾಯಾವತಿ

ಆಕ್ಷೇಪಾರ್ಹ ಹೇಳಿಕೆ: ಬಿಜೆಪಿ ಶಾಸಕಿ ಸಾಧನ ಸಿಂಗ್ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಿದ ಬಿಎಸ್ಪಿ

ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಮಾಯಾವತಿ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಬಿಜೆಪಿ ಶಾಸಕಿ ಸಾಧನ ಸಿಂಗ್ ವಿರುದ್ಧ ಬಿಎಸ್ಪಿ ಇಂದು ದೂರು ದಾಖಲಿಸಿದೆ.

ಚಂದೂಲ್ : ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಮಾಯಾವತಿ ಬಗ್ಗೆ  ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಬಿಜೆಪಿ ಶಾಸಕಿ ಸಾಧನ ಸಿಂಗ್  ವಿರುದ್ಧ ಬಿಎಸ್ಪಿ ಇಂದು ದೂರು ದಾಖಲಿಸಿದೆ.

 ವಾರಣಾಸಿ ಮತ್ತು ಅಜಂಘಡ ವಲಯದ ಬಿಎಸ್ಪಿ ಉಸ್ತುವಾರಿ ರಾಮ್ ಚಂದ್ರ ಗೌತಮ್ ಅವರು ಚಂದೂಲ್ ಜಿಲ್ಲೆಯ ಬಾಬುರಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮೇಲ್ವರ್ಗಕ್ಕೆ ಸೇರಿರುವ ಸಾಧನಾ ಸಿಂಗ್  ಸಾರ್ವಜನಿಕ ಸಭೆಯಲ್ಲಿ ಪರಿಶಿಷ್ಟ ಜಾತಿಗೆ ಸೇರಿರುವ ಮಾಯಾವತಿ ವಿರುದ್ಧ  ಆಶ್ಲೀಲ ಭಾಷೆ ಬಳಸುವ ಮೂಲಕ ಅಪಮಾನ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಶನಿವಾರ ನಡೆದ ಬಹಿರಂಗ ಸಮಾವೇಶವೊಂದರಲ್ಲಿ ಬಿಎಸ್ಪಿ ನಾಯಕಿ ಮಾಯಾವತಿ ವಿರುದ್ಧ ಸಾಧನ ಸಿಂಗ್ ಅವಹೇಳನಕಾರಿ ಹೇಳಿಕೆ ನೀಡಿದ್ದರು. ನನ್ನ ಪ್ರಕಾರ ಮಾಯಾವತಿ ಅತ್ತ ಹೆಂಗಸೂ ಅಲ್ಲ, ಇತ್ತ ಗಂಡಸೂ ಅಲ್ಲ. ಕೇವಲ ಅಧಿಕಾರಕ್ಕಾಗಿ ಆಕೆ ತಮ್ಮ ಪ್ರತಿಷ್ಠೆ ಮಾರಿಕೊಂಡಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತು.

ಐಪಿಸಿ ಸೆಕ್ಷನ್ ಅನ್ವಯ ಶಾಸಕಿ ಸಾಧನ ಸಿಂಗ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪೊಲೀಸರ ಬಳಿ ಮನವಿ ಮಾಡುವುದಾಗಿ ಗೌತಮ್   ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com