ಬಂಗಾಲಿ ವಧು ಕೆಂಪು ಬನಾರಸ್ ಸೀರೆಯಲ್ಲಿ ಕಂಗೊಳಿಸುತ್ತಿದ್ದು ಗಂಡನ ಮನೆಗೆ ಹೋಗುವ ಮುನ್ನ ಕನಕಾಂಜಲಿ ಆಚರಣೆ ಮಾಡಬೇಕಾಗುತ್ತದೆ. ಈ ಆಚರಣೆಯಲ್ಲಿ ವಧು ತನ್ನ ತಾಯಂದಿರಿಗೆ ಅಕ್ಕಿಯನ್ನು ಎಸೆದು ಅವರ ಋಣವನ್ನು ತೀರಿಸಿದ್ದೇನೆ ಎಂದು ಹೇಳಬೇಕಾಗುತ್ತದೆ. ಆದರೆ ಈ ವಧು ನಾವು ಎಂದಿಗೂ ತಾಯಿಯ ಋಣವನ್ನು ತೀರಿಸಲಾಗದು ಎಂದು ಹೇಳಿರುವ ವಿಡಿಯೋ ಇದೀಗ ವೈರಲ್ ಆಗಿದೆ.