ಡೆಹ್ರಾಡೂನ್: ಆಮ್ಲಜನಕ ಸೇವಿಸಿ ಮತ್ತೆ ಆಮ್ಲಜನಕವನ್ನೇ ವಾಪಸ್ ಬಿಡುವ ಏಕೈಕ ಪ್ರಾಣಿ ಗೋವು ಎಂದು ಉತ್ತರಾಖಂಡ್ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಹೇಳಿದ್ದಾರೆ..ಗೋಮೂತ್ರ ಮತ್ತು ಹಾಲು ಸೇರಿದಂತೆ ಗೋವುಗಳ ಹಲವು ಔಷಧೀಯ ಉತ್ಪನ್ನಗಳ ಬಗ್ಗೆ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ್ದ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ..ಆಮ್ಮಜನಕ ಉಸಿರಾಡಿ ಆಮ್ಲಜನಕವನ್ನು ವಾಪಸ್ ಬಿಡುವ ಪ್ರಾಣ ಹಸು ಎಂದು ಹೇಳಿರುವ ಅವರು, ಹಸವನ್ನು ಮಸಾಜಾ ಮಾಡುವುದರಿಂದ ಉಸಿರಾಟದ ಸಮಸ್ಯೆ ದೂರಾಗುತ್ತದೆ ಎಂದು ತಿಳಿಸಿದ್ದಾರೆ. .ಬಾಗೇಶ್ವರದಲ್ಲಿರುವ ಗರುಡ ಗಂಗಾ ನದಿಯ ನೀರನ್ನು ಗರ್ಬಿಣಿಯರು ಕುಡಿದೆರೇ ಸಿಸೇರಿಯನ್ ಅಗುವುದನ್ನು ತಪ್ಪಿಸಬಹುದು ಎಂದು ನೈನಿತಾಲ್ ಬಿಜೆಪಿ ಸಂಸದ ಅಜಯ್ ಭಟ್ ಇತ್ತೀಚೆಗೆ ಹೇಳಿದ್ದರು.Follow KannadaPrabha channel on WhatsApp KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ Subscribe to KannadaPrabha YouTube Channel and watch Videos