ಬೈಕ್ ಸಹಿತ ಬಾವಿಗೆ ಬಿದ್ದ ವ್ಯಕ್ತಿ, 2 ದಿನಗಳ ಬಳಿಕ ಸಾರ್ವಜನಿಕರಿಂದ ರಕ್ಷಣೆ

ರಸ್ತೆಯಲ್ಲಿ ಚಲಿಸುವಾಗ ಆಯತಪ್ಪಿ ಬೈಕ್ ಸಹಿತ ಬಾವಿಯಲ್ಲಿ ಬಿದ್ದಿದ್ದ ದ್ವಿಚಕ್ರ ವಾಹನ ಸವಾರನನ್ನು 2 ದಿನಗಳ ಬಳಿಕ ಸಾರ್ವಜನಿಕರು ರಕ್ಷಿಸಿರುವ ಘಟನೆ ತೆಲಂಗಾಣದಲ್ಲಿ ಶನಿವಾರ ರಾತ್ರಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ವರಂಗಲ್: ರಸ್ತೆಯಲ್ಲಿ ಚಲಿಸುವಾಗ ಆಯತಪ್ಪಿ ಬೈಕ್ ಸಹಿತ ಬಾವಿಯಲ್ಲಿ ಬಿದ್ದಿದ್ದ ದ್ವಿಚಕ್ರ ವಾಹನ ಸವಾರನನ್ನು 2 ದಿನಗಳ ಬಳಿಕ ಸಾರ್ವಜನಿಕರು ರಕ್ಷಿಸಿರುವ ಘಟನೆ ತೆಲಂಗಾಣದಲ್ಲಿ ಶನಿವಾರ ರಾತ್ರಿ ನಡೆದಿದೆ. 
ತೆಲಂಗಾಣದ ವರಂಗಲ್ ಜಿಲ್ಲೆಯ ಮುಚಾರ್ಲಾ ನಗರಂ ಪ್ರದೇಶದಲ್ಲಿ ಘಟನೆ ನಡೆದಿದ್ದು, ವ್ಯಕ್ತಿಯೊಬ್ಬ ತನ್ನ ದ್ವಿಚಕ್ರವಾಹನದಲ್ಲಿ ಚಲಿಸುತ್ತಿದ್ದಾಗ ಆಯತಪ್ಪಿ ಬಾವಿಗೆ ಬಿದ್ದಿದ್ದಾನೆ. ಬಿದ್ದ ಕೂಡಲೆ ಆತ ಬಾವಿಯೊಳಗಿನಿಂದಲೇ ಕೂಗಿಕೊಂಡು, ಕಿರುಚಿದರೂ ಯಾರೂ ಕೇಳಿಸಿಕೊಂಡಿರಲಿಲ್ಲ. ಈತ ಬಿದ್ದ ಬಾವಿಯ ಸಮೀಪ ಜನರು ಓಡಾಟ ಅಷ್ಟೇನೂ ಇರಲಿಲ್ಲ. ಹೀಗಾಗಿ ಆತ ಬಾವಿಗೆ ಬಿದ್ದ ವಿಚಾರ ಯಾರ ಗಮನಕ್ಕೂ ಬಂದಿಲ್ಲ.
ಶನಿವಾರ ಸಾರ್ವಜನಿಕರೊಬ್ಬರು ಆ ಬಾವಿಯ ಬಳಿ ಬಂದು ಗಮನಿಸಿದಾಗ ಈತ ಬಾವಿಯಲ್ಲಿ ಬಿದ್ದಿದ್ದು ನರಳಾಡುತ್ತಿದುದು ಕಂಡು ಬಂದಿದೆ. ಕೂಡಲೆ ಆತ ಇತರರಿಗೂ ಮಾಹಿತಿ ನೀಡಿದ್ದು, ಜನರು ಜಮಾಯಿಸಿ ಹಗ್ಗಗಳನ್ನು ಬಳಸಿ ಆತನನ್ನು ಮೇಲೆತ್ತಿದ್ದಾರೆ. ನಂತರ ಬೈಕ್ ಅನ್ನೂ ಹೊರತೆಗೆದಿದ್ದಾರೆ. ಪ್ರಸ್ತುತ ಆತನನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com