ಈ ಹಿಂದೆ ಲೋಕಸಭಾ ಚುನಾವಣೆ ವೇಳೆ ವ್ಯಾಪಕ ರಾಜಕೀಯ ಸಂಘರ್ಷಕ್ಕೆ ಸಾಕ್ಷಿಯಾಗಿದ್ದ 24ಪರಗಣ ಜಿಲ್ಲೆಯ ಕಂಕಿನಾರಾದಲ್ಲಿ ಮತ್ತೆ ಸಂಘರ್ಷ ಸಂಭವಿಸಿದ್ದು, ಇಲ್ಲಿನ ಬುರುಯ್ ಪಾರದಲ್ಲಿ ದುಷ್ಕರ್ಮಿಗಳು ಮನೆ ಮೇಲೆ ಎಸೆದ ಕಚ್ಛಾ ಬಾಂಬ್ ದಾಳಿಯಲ್ಲಿ ಓರ್ವ ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ. ಇನ್ನು ಮೃತ ವ್ಯಕ್ತಿಯನ್ನು 68 ವರ್ಷದ ಮಹಮದ್ ಮುಖ್ತಾರ್ ಎಂದು ಗುರುತಿಸಲಾಗಿದೆ. ಗಾಯಾಳುಗಳಲ್ಲಿ ಮುಖ್ತಾರ್ ಪತ್ನಿ ಕೂಡ ಸೇರಿದ್ದಾರೆ ಎನ್ನಲಾಗಿದೆ.