ಸಿಆರ್ ಪಿಎಫ್ ನ 199ನೇ ಬೆಟಾಲಿಯನ್ ಮತ್ತು ಸ್ಥಳೀಯ ಪೊಲೀಸರು ಬಿಜಾಪುರ್ ಜಿಲ್ಲೆಯ ಬೈರಮ್ ಗರ್ ಪೊಲೀಸ್ ಠಾಣೆಯ ಪ್ರದೇಶದ ಕೆಶ್ಕುತುಲ್ ಗ್ರಾಮದಲ್ಲಿ ಇಂದು ನಸುಕಿನ ಜಾವ ಶೋಧ ಕಾರ್ಯ ನಡೆಸುತ್ತಿದ್ದಾಗ ನಕ್ಸಲೀಯರು ಗುಂಡಿನ ಮಳೆ ಹರಿಸಲು ಆರಂಭಿಸಿದರು. ಅದಕ್ಕೆ ಪ್ರತಿಯಾಗಿ ಯೋಧರು ದಾಳಿ ನಡೆಸಿದಾಗ ಗುಂಡಿನ ಚಕಮಕಿ ನಡೆಯಿತು ಎಂದು ಬಸ್ಟರ್ ವಲಯದ ಐಜಿ ವಿವೇಕಾನಂದ ಸಿನ್ಹಾ ತಿಳಿಸಿದ್ದಾರೆ.