ರಾಂಚಿ: ದೇಶದ ಎಲ್ಲಾ ಕಳ್ಳರ ಹೆಸರುಗಳು ಮೋದಿ ಎಂಬ ಹೆಸರಿಂದಲೇ ಕೊನೆಯಾಗುತ್ತದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ರಾಂಚಿಯಲ್ಲಿ ನಡೆದ ಪರಿವರ್ತನ್ ಉಲುಗನ್ ರ್ಯಾಲಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಲಲಿತ್ ಮೋದಿ, ನೀರವ್ ಮೋದಿ ಹಾಗೂ ನರೇಂದ್ರ ಮೋದಿ ಈ ಎಲ್ಲಾ ಕಳ್ಳರ ಹೆಸರು ಮೋದಿ ಎಂಬುದರಿಂದಲೇ ಕೊನೆಯಾಗುತ್ತದೆ ಎಂದು ಲೇವಡಿ ಮಾಡಿದ್ದಾರೆ.
ಚೌಕಿದಾರರು ಪ್ರಾಮಾಣಿಕವಾಗಿರಬಹುದು, ಆದರೆ ಒಬ್ಬ ಚೌಕಿದಾರ ಮಾತ್ರ ದೇಶದ ಎಲ್ಲಾ ಚೌಕಿದಾರರ ಹೆಸರನ್ನು ಹಾಳು ಮಾಡಿದ್ದಾರೆ, ಆದರೆ ನಾವೆಲ್ಲರೂ ಒಟ್ಟಾಗಿ ಚೌಕೀದಾರ್ ಇಸ್ ಚೋರ್ ಎಂದು ಕೂಗಿದರೇ, ಅನುಮಾನವೇ ಬೇಡ, ಅದು ಪ್ರಧಾನಿ ಮೋದಿಯೇ ಆಗಿರುತ್ತಾರೆ ಎಂದು ಹೇಳಿದ್ದಾರೆ,
ಈ ಚೌಕಿದಾರ ಕೇವಲ ರಫೇಲ್ ಡೀಲ್ ನಿಂದ ಮಾತ್ರ ಹಣ ಕದ್ದಿಲ್ಲ, ಭಾರತೀಯ ವಾಯು ಸೇನೆ (ಐಎಎಫ್) ನಿಂದ 30 ಸಾವಿರ ಕೋಟಿ ಹಣ ಕದ್ದು, ಅನಿಲ್ ಅಂಬಾನಿ ಜೇಬಿಗೆ ಹಾಕಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ಅಂಬಾನಿ ಮತ್ತು ದೊಡ್ಡ ದೊಡ್ಡ ಕೈಗಾರಿಕೋದ್ಯಮಿಗಳ ಸುಮಾರು 3,50.000 ಕೋಟಿ ಹಣವನ್ನು ಸಾಲಮನ್ನಾ ಮಾಡಿದ್ದಾರೆ, ನಾನು ಅದಿಕಾರಕ್ಕೆ ಬಂದರೇ ಕಾರ್ಮಿಕರ ಹಾಗೂ ರೈತರ ಸಾಲವನ್ನು ಒಂದು ತಿಂಗಳೊಳಗೆ ಮಾಡುವೆ ಎಂದು ತಿಳಿಸಿದ್ದಾರೆ