ಪರಿಕ್ಕರ್ ಕಳೆದ ಒಂದೂವರೆ ವರ್ಷದಿಂದ ಕ್ಯಾನ್ಸರ್ ಪೀಡಿತರಾಗಿ, ದೆಹಲಿಯ ಏಮ್ಸ್ ಹಾಗೂ ಉನ್ನತ ಚಿಕಿತ್ಸೆಗಾಗಿ ಅಮೆರಿಕಕ್ಕೆ ಹೋಗಿ ಬಂದ ಬಳಿಕವೂ, ಕೊಂಚವೂ ವಿರಮಿಸದೇ, ಕರ್ತವ್ಯಕ್ಕೆ ಹಾಜರಾಗಿ, ಎಂದಿನಂತೆ ಸಕ್ರಿಯರಾಗಿದ್ದರು. ಪ್ಯಾಂಕ್ರಿಯಾಟಿಕ್ ಸಮಸ್ಯೆಯಿಂದ ಬಳಲುತ್ತಿದ್ದರೂ ರಾಜ್ಯದ ಅಭಿವೃದ್ಧಿ ಕೆಲಸಗಳ ಖುದ್ದು ಮೇಲುಸ್ತುವಾರಿ ವಹಿಸಿದ್ದ ಪರ್ರಿಕರ್, ಮೂಗಿಗೆ ಕೊಳವೆ ಹಾಕಿಕೊಂಡೇ ವಿಧಾನಸಭೆಯಲ್ಲಿ ಹಾಜರಾಗುತ್ತಿದ್ದರು. ಅಂತೆಯೇ ಮೂಗಿಗೆ ಪೈಪ್ ಗಳನ್ನು ಹಾಕಿಕೊಂಡೇ ಗೋವಾ ಅಭಿವೃದ್ಧಿ ಕೆಲಸಗಳನ್ನು ವೀಕ್ಷಿಸುತ್ತಿದ್ದ ಅವರ ಫೋಟೋಗಳು ವೈರಲ್ ಆಗಿತ್ತು.