ಒಂದು ರಾಷ್ಟ್ರ, ಒಂದು ವೇತನದ ದಿನ' ಹೊಸ ವ್ಯವಸ್ಥೆ ಜಾರಿ: ಸಂತೋಷ್ ಗಂಗ್ವಾರ್

ದೇಶದ ವೇತನದಾರರ ಹಿತ ಕಾಪಾಡಲು ರಾಷ್ಟ್ರದಾದ್ಯಂತ 'ಒಂದು ರಾಷ್ಟ್ರ, ಒಂದು ವೇತನದ ದಿನ'ಹೊಸ  ವ್ಯವಸ್ಥೆ ಜಾರಿಗೆ  ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ತಿಳಿಸಿದ್ದಾರೆ.
ಮೋದಿ
ಮೋದಿ
Updated on

ಮುಂಬೈ: ದೇಶದ ವೇತನದಾರರ ಹಿತ ಕಾಪಾಡಲು ರಾಷ್ಟ್ರದಾದ್ಯಂತ 'ಒಂದು ರಾಷ್ಟ್ರ, ಒಂದು ವೇತನದ ದಿನ'ಹೊಸ  ವ್ಯವಸ್ಥೆ ಜಾರಿಗೆ  ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ತಿಳಿಸಿದ್ದಾರೆ. 

ಕೇಂದ್ರ ಸಹಕಾರದ ಖಾಸಗಿ ಭದ್ರತಾ ಉದ್ಯಮ (ಸಿಎಪಿಎಸ್ಐ) ಆಯೋಜಿಸಿದ್ದ ಭದ್ರತಾ ನಾಯಕತ್ವ ಶೃಂಗ – 2019 ರ ಕಾರ್ಯಕ್ರಮದಲ್ಲಿ ಅವರು ಶನಿವಾರ ಈ ಬಗ್ಗೆ ಮಾತನಾಡಿದರು.

ಕೇಂದ್ರ ಸರ್ಕಾರ ಉದ್ಯೋಗ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಸ್ಥಿತಿ ಸಂಹಿತೆ ಮತ್ತು ವೇತನ ಸಂಹಿತೆ ಜಾರಿಗಾಗಿ ಕಾರ್ಯಪ್ರವೃತ್ತವಾಗಿದೆ. ವೇತನ ಸಂಹಿತೆಯನ್ನು ಸಂಸತ್ ಈಗಾಗಲೇ ಅಂಗೀಕರಿಸಿದೆ. ಇದರ ಅನುಷ್ಠಾನಕ್ಕಾಗಿ ನಿಯಮಗಳನ್ನು ರೂಪಿಸಲಾಗುತ್ತಿದೆ ಎಂದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com