ಆರ್ ಎಸ್ ಎಸ್ ಕಾರ್ಯಕರ್ತ ಸೇರಿ ಕುಟುಂಬಸ್ಥರ ಹತ್ಯೆ ಪ್ರಕರಣ: ಪ್ರಧಾನ ಆರೋಪಿ ಬಂಧನ
ಕೊಲ್ಕೊತಾ: ಆರ್ ಎಸ್ ಎಸ್ ಕಾರ್ಯಕರ್ತ ಹಾಗೂ ಆತನ ಗರ್ಭಿಣಿ ಪತ್ನಿ ಮತ್ತು 5 ವರ್ಷದ ಮಗನನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಧಾನ ಆರೋಪಿಯನ್ನು ಬಂಧಿಸಿದ್ದಾರೆ.
ಮಂಗಳವಾರ ಪೊಲೀಸರು ಮೃತ ವ್ಯಕ್ತಿಯ ಸ್ನೇಹಿತನನ್ನು ಬಂಧಿಸಿದ್ದಾರೆ. ಬಂಧು ಪ್ರಕಾಶ್ ಪಲ್ ಅವರ ಸ್ನೇಹಿತ ಉತ್ಪಾಲ್ ಬೆಹ್ರಾ ಎಂಬಾತ ಇನ್ಸ್ಯೂರೆನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಆತನು ಪ್ರಾಥಮಿಕ ಶಾಲೆಯ ಶಿಕ್ಷಕನಾಗಿದ್ದ, ಬಂಧು ಪ್ರಕಾಶ್ ಆತನ ಬಳಿ ಇನ್ಸ್ಯೂರೆನ್ಸ್ ಮಾಡಿಸಿದ್ದರು, ಅದಕ್ಕಾಗಿ ಹಣ ನೀಡುತ್ತಿದ್ದರು.
ಆದರೆ ಉತ್ಪಾಲ್ ಬೆಹ್ರಾ ಪ್ರೀಮಿಯಂ ಕಟ್ಟದೆ ಹಣವನ್ನು ತಾನೆ ಬಳಸಿಕೊಂಡಿದ್ದ, ಪ್ರೀಮಿಯಂ ಕಟ್ಟಿದ ರಸೀದಿ ನೀಡುವಂತೆ ಕೇಳಿದ್ದಾನೆ, ಈ ವೇಳೆ ಆತ ಅನುಚಿತವಾಗಿ ವರ್ತಿಸಿದ್ದಾನೆ, ಪದೇ ಪದೇ ರಸೀದಿ ನೀಡುವಂತೆ ಕೇಳಿದ ಹಿನ್ನೆಲೆಯಲ್ಲಿ ಆತನನ್ನು ಕೊಲೆ ಮಾಡಲು ನಿರ್ಧರಿಸಿದ.
ಅದರಂತೆ ಕಳೆದ ಬುಧವಾರ ಬಂಧು ಪ್ರಕಾಶ್ ನನ್ನು ಕೊಲೆ ಮಾಡಿದ್ದಾನೆ, ನಂತರ ಈ ವಿಷಯ ಆತನ ಪತ್ನಿ ಮತ್ತು ಮಗನಿಗೆ ತಿಳಿಯಿತು ಎಂಬ ಕಾರಣದಿಂದಾಗಿ ಅವರಿಬ್ಬರನ್ನು ಕೊಲೆ ಮಾಡಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ