ಆನೆ, ಹುಲಿ ರೀತಿ ಗೋವು ಸಫಾರಿಗೆ ಉತ್ತರಪ್ರದೇಶ ಸರ್ಕಾರ ಚಿಂತನೆ

ಅಭಯಾರಣ್ಯಗಳಲ್ಲಿ ಆನೆ, ಹುಲಿ ಸಫಾರಿ ಸಾಮಾನ್ಯ. ಆದರೆ, ಇದೇ ಮೊದಲ ಬಾರಿಗೆ ಉತ್ತರಪ್ರದೇಶ ಸರ್ಕಾರ ಗೋವು ಸಫಾರಿ ಎಂಬ ವಿನೂತನ ಯೋಜನೆ ಜಾರಿಗೆ ಮುಂದಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಲಖನೌ: ಅಭಯಾರಣ್ಯಗಳಲ್ಲಿ ಆನೆ, ಹುಲಿ ಸಫಾರಿ ಸಾಮಾನ್ಯ. ಆದರೆ, ಇದೇ ಮೊದಲ ಬಾರಿಗೆ ಉತ್ತರಪ್ರದೇಶ ಸರ್ಕಾರ ಗೋವು ಸಫಾರಿ ಎಂಬ ವಿನೂತನ ಯೋಜನೆ ಜಾರಿಗೆ ಮುಂದಾಗಿದೆ. 

ರಸ್ತೆಗಳಲ್ಲಿ ಎಲ್ಲೆಂದರಲ್ಲಿ ತಿರುಗುವ ಬೀಡಾಡಿ ದನಗಳನ್ನು ಒಂದೆಡೆ ಸೇರಿಸಿ, ಆ ಪ್ರದೇಶವನ್ನು ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿಪಡಿಸಲು ಉತ್ತರಪ್ರದೇಶ ಸರ್ಕಾರ ನಿರ್ಧರಿಸಿದೆ. 

ಉತ್ತರಪ್ರದೇಶದ ಪಶುಸಂಗೋಪನಾ ಖಾತೆ ಸಚಿವ ಲಕ್ಷ್ಮೀ ನಾರಾಯಣ್ ಚೌಧರಿಯವರು ಇಂತಹದ್ದೊಂದು ವಿನೂತನ ಯೋಜನೆಯ ರೂಪರೇಷೆ ತಯಾರಿಸಿದ್ದಾರೆ. 

ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಎಲ್ಲೆಲ್ಲಿ ಖಾಲಿ ಜಾಗ ಇದೆಯೋ ಅಲ್ಲಿ ಕನಿಷ್ಠ 15,000-20,000 ಬೀಡಾಡಿ ದನಗಳನ್ನು ಇಡಲಾಗುವುದು. ಇದರಿಂದ ಬೀಡಾಡಿ ದನಗಳಿಂದ ರಸ್ತೆಗಳಲ್ಲಿ ಆಗುವ ತೊಂದರೆ ತಪ್ಪುತ್ತದೆ. ದನಗಳ ನಿರ್ವಹಣೆಯೂ ಸುಲಭವಾಗುತ್ತದೆ. ಜೊತೆಗೆ ಈ ಪ್ರದೇಶದಲ್ಲಿ ಗೋವಿನ ತ್ಯಾಜ್ಯದಿಂದ ವಿವಿಧ ಉತ್ಪನ್ನಗಳನ್ನು ತಯಾರಿಸುವ ಘಟಕ ತಯಾರಿಸಲಾಗುವುದು. ಬಯೋಗ್ಯಾಸ್ ಘಟಕ ಆರಂಭಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com