ಜನವರಿ 8ರಂದು ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಗಿತ್ತು. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಸಚಿವ ಥಾವರ್ ಚಂದ್ ಗೆಹ್ಲೋಟ್ ಈ ಮಸೂದೆಯನ್ನು ಮಂಡಿಸಿದರು. ಸಮಾಜವಾದಿ ಪಕ್ಷದ ತೀವ್ರ ಪ್ರತಿಭಟನೆಯ ನಡುವೆಯೂ ಥಾವರ್ ಚಂದ್ ಗೆಹ್ಲೋಟ್ ಈ ಮಸೂದೆಯನ್ನು ಮಂಡಿಸಿದರು. ಸದನದಲ್ಲಿ ಹಾಜರಿದ್ದ ಸದಸ್ಯರಲ್ಲಿ ಮಸೂದೆ ಪರವಾಗಿ 323 ಸಂಸದರು ಮತ ಚಲಾಯಿಸಿದರೆ, 5 ಮಂದಿ ಮಾತ್ರ ವಿರುದ್ಧ ಮತ ಹಾಕಿದರು. ಆ ಮೂಲಕ ವಿಧೇಯಕ ಕೆಳಮನೆಯ ಅಂಗೀಕಾರ ಪಡೆಯಿತು.