ಎಲ್ಲಾ ಮಟ್ಟದ ಅಧಿಕಾರಿಗಳಿಗೂ ಮನವಿ ಮಾಡಲಾಗಿದೆ. ಆದರೆ, ಯಾವುದೇ ನೆರವು ಸಿಗುತ್ತಿಲ್ಲ ಎಂದು ತಾಕ್ತೊಡಾ ಪಂಚಾಯಿತಿ ಅಧ್ಯಕ್ಷ ಪ್ರಮೋದ್ ಪಾಟೀಲ್ ಹೇಳಿದ್ದಾರೆ. ಗ್ರಾಮಸ್ಥರ ಬೇಡಿಕೆಯಿಂದಲೇ ಅವರ ಆಕ್ರೋಶ ಗೊತ್ತಾಗುತ್ತದೆ. ಸರ್ಕಾರ ಅವರೊಂದಿಗೆ ಇದ್ದು, ಎಲ್ಲಾ ರೀತಿಯ ನೆರವು ನೀಡುವುದಾಗಿ ಕೃಷಿ ಸಚಿವ ಡಾ. ಅನಿಲ್ ಬೊಂಡೆ ಹೇಳಿದ್ದಾರೆ.