ನಡುಬೀದಿಯಲ್ಲೇ ನಡೀತು ಘೋರ ಕೃತ್ಯ!ಮಹಿಳಾ ಪೋಲೀಸ್ ಅಧಿಕಾರಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ

ಸಹೋದ್ಯೋಗಿ ಒಬ್ಬ ಮಹಿಳಾ ಪೊಲೀಸ್​ ಅಧಿಕಾರಿಯನ್ನು ನಟ್ಟ ನಡು ಬೀದಿಯಲ್ಲೇ ಬೆಂಕಿ ಹಚ್ಚಿ ಕೊಂದು ಹಾಕಿರುವ ಅಮಾನವೀಯ ಘಟನೆ ಕೇರಳದ ಅಲಪ್ಪುಳ ಜಿಲ್ಲೆ ಲ್ಲಿಕುನ್ನಂ ಬಳಿಯ ಕಾಂಜಿಪುಳ ಎಂಬಲ್ಲಿ ನಡೆದಿದೆ.
ಸೌಮ್ಯ ಪುಷ್ಪಾಕರನ್
ಸೌಮ್ಯ ಪುಷ್ಪಾಕರನ್
ಅಲಪ್ಪುಳ": ಸಹೋದ್ಯೋಗಿ ಒಬ್ಬ ಮಹಿಳಾ ಪೊಲೀಸ್​ ಅಧಿಕಾರಿಯನ್ನು ನಟ್ಟ ನಡು ಬೀದಿಯಲ್ಲೇ ಬೆಂಕಿ ಹಚ್ಚಿ ಕೊಂದು ಹಾಕಿರುವ ಅಮಾನವೀಯ ಘಟನೆ ಕೇರಳದ ಅಲಪ್ಪುಳ ಜಿಲ್ಲೆ ವಲ್ಲಿಕುನ್ನಂ ಬಳಿಯ ಕಾಂಜಿಪುಳ ಎಂಬಲ್ಲಿ ನಡೆದಿದೆ.
ಮೃತ ಪೋಲೀಸ್ ಅಧಿಕಾರಿಯನ್ನು ಸೌಮ್ಯ ಪುಷ್ಪಾಕರನ್(30) ಎಂದು ಗುರುತಿಸಲಾಗಿದೆ.ಈಕೆ ವಲ್ಲಿಕುನ್ನಂ ಪೊಲೀಸ್​ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದು ಕರ್ತವ್ಯ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ದುಷ್ಕರ್ಮಿ ಪೋಲೀಸ್ ಅಧಿಕಾರಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.
ಇನ್ನು ಬೆಂಕಿ ಹಚ್ಚಿದ ಆರೋಪಿಯನ್ನು ಏಜಾಜ್​  ಎಂದು ಗುರುತಿಸಲಾಗಿದ್ದು ಆತ ಳುವಾ ಸಂಚಾರ ಪೊಲೀಸ್​ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದನು.ಘಟನೆಯಲ್ಲಿ ಆತನಿಗೂ ಸಹ ಗಾಯಗಳಾಗಿದ್ದು ಅವನನ್ನು ವಶಕ್ಕೆ ಪಡೆದಿರುವ ಪೋಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮೃತ ಪೋಲೀಸ್ ಅಧಿಕಾರಿ ಎರಡು ಮಕ್ಕಳ ತಾಯಿಯಾಗಿದ್ದಾರೆ. ಘಟನೆಗೆ ಕಾರಣವಿನ್ನೂ ತಿಳಿದು ಬಂದಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com