ಪಂಜಾಬ್: ಸಚಿವ ಸಿಧು ಮೇಲೆ ಚಪ್ಪಲಿ ಎಸೆದ ಮಹಿಳೆ ಬಂಧನ

ಸಾರ್ವಜನಿಕ ಸಭೆಯಲ್ಲಿ ಕಾಂಗ್ರೆಸ್ ಮುಖಂಡ , ಸಚಿವ ನವಜೋತ್ ಸಿಂಗ್ ಸಿಧುವಿನತ್ತ ಚಪ್ಪಲಿ ಎಸೆಯಲು ಪ್ರಯತ್ನಿಸಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ಸಿಧು, ಚಪ್ಪಲಿ ಎಸೆದ ಮಹಿಳೆ
ಸಿಧು, ಚಪ್ಪಲಿ ಎಸೆದ ಮಹಿಳೆ

ಪಂಜಾಬ್: ಸಾರ್ವಜನಿಕ ಸಭೆಯಲ್ಲಿ  ಕಾಂಗ್ರೆಸ್ ಮುಖಂಡ , ಸಚಿವ ನವಜೋತ್ ಸಿಂಗ್ ಸಿಧುವಿನತ್ತ ಚಪ್ಪಲಿ ಎಸೆಯಲು ಪ್ರಯತ್ನಿಸಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

ಮೋದಿ ವಿರುದ್ಧವಾಗಿ ಮಾತನಾಡಿದ್ದಕ್ಕೆ  ಸಿಧುವಿನತ್ತ ಚಪ್ಪಲಿ ಎಸೆದಿದ್ದಾಗಿ ಆ ಮಹಿಳೆ ಪೊಲೀಸರ ಬಳಿ  ಹೇಳುತ್ತಿರುವುದು ಕಿರು ವಿಡಿಯೋದಲ್ಲಿ ದಾಖಲಾಗಿದೆ.

ಕಾಂಗ್ರೆಸ್ ಪಕ್ಷದ ರಾಹುಲ್ ಗಾಂಧಿ ಅವರನ್ನು ಉದಾಹರಣೆಯಾಗಿ ನೀಡುತ್ತಾ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಚೌಕಿದಾರ್ ಚೋರ್  ಎಂದು ನವಜೋತ್ ಸಿಂಗ್ ಸಿಧು ವಾಗ್ದಾಳಿ ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ.

ಚೌಕಿದಾರ್ ಚೋರ್ ಹೈ ಹೇಳಿಕೆ ಸಂಬಂಧ ಸುಪ್ರೀಂಕೋರ್ಟ್ ನಲ್ಲಿ ರಾಹುಲ್ ಗಾಂಧಿ ಬುಧವಾರ ಕ್ಷಮೆಯಾಚಿಸಿದ್ದರು. ತಮ್ಮ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆಯನ್ನು ಮುಕ್ತಾಯಗೊಳಿಸುವಂತೆ ಕೇಳಿಕೊಂಡಿದ್ದರು.

ಏಪ್ರಿಲ್ ತಿಂಗಳಲ್ಲಿ ಬಿಜೆಪಿ ರಾಷ್ಟ್ರೀಯ ವಕ್ತಾರ ಜಿವಿಎಲ್ ನರಸಿಂಹ ರಾವ್ ವಿರುದ್ಧವೂ ಶೂ ಎಸೆಯಲಾಗಿತ್ತು. ಆದಾಗ್ಯೂ, ಅದು ಅವರಿಗೆ ತಾಗಿರಲಿಲ್ಲ.ಭೂಪಾಲ್ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಗ್ಯಾ ಪರ ಮಾತನಾಡುತ್ತಾ ಹಿಂದೂ ಸಮುದಾಯಕ್ಕೆ ಕಾಂಗ್ರೆಸ್  ಅಪಚಾರ ಮಾಡುತ್ತಿದೆ ಎಂದು ನರಸಿಂಹರಾವ್ ಟೀಕಿಸಿದ್ದರು. ಇದರಿಂದ ಆಕ್ರೋಶಗೊಂಡ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಶೂ ಎಸೆದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com