ಪಾಟ್ನ: ಪ್ರವಾಹ ಪೀಡಿತ ಬಿಹಾರದ ಉಪಮುಖ್ಯಮಂತ್ರಿ ಸುಶೀಲ್ ಮೋದಿ ಹಾಗೂ ಅವರ ಕುಟುಂಬ ಸದಸ್ಯರನ್ನು ಜಲಾವೃತ ನಿವಾಸದಿಂದ ರಕ್ಷಿಸಲಾಗಿದೆ.
ಎನ್ ಡಿ ಆರ್ ಎಫ್ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ದಳದ ಸಿಬ್ಬಂದಿಗಳು ಉಪಮುಖ್ಯಮಂತ್ರಿಗಳ ಕುಟುಂಬ ಸದಸ್ಯರನ್ನು ರಕ್ಷಣೆ ಮಾಡಿದ್ದಾರೆ.
ಬಿಹಾರ ವಿಪತ್ತು ನಿರ್ವಹಣಾ ಪ್ರಾಧಿಕಾರ ಪ್ರಕಾರ 29 ಮಂದಿ ಸಾವನ್ನಪ್ಪಿದ್ದಾರೆ. ಈ ವರೆಗೂ ಎನ್ ಡಿ ಆರ್ ಎಫ್ 235 ಜನರನ್ನು ರಕ್ಷಣೆ ಮಾಡಿದೆ.
Advertisement