ಪತ್ನಿಯೊಂದಿಗಿರುವ ಗುಡ್ಡು
ಪತ್ನಿಯೊಂದಿಗಿರುವ ಗುಡ್ಡು

ದಿನಸಿ ಸಾಮಾಗ್ರಿ ತರಲು ಕಳುಹಿಸಿದ್ರೆ, ಹೆಂಡತಿ ಕರೆತಂದ ಭೂಪ: ತಾಯಿಗೆ ಆಘಾತ!

ದಿನಸಿ ಸಾಮಾಗ್ರಿ ತರುವಂತೆ ಅಂಗಡಿಗೆ ಕಳುಹಿಸಿದರೆ, ಹೆಂಡತಿ ಕರೆತಂದು ನಿಲ್ಲಿಸಿದ ಪುತ್ರನನ್ನು ಕಂಡು ತಾಯಿಯೊಬ್ಬರೂ ಆಘಾತಕ್ಕೊಳಗಾದ ಘಟನೆ ಉತ್ತರಪ್ರದೇಶದ ಘಾಜಿಯಾಬಾದ್ ನಲ್ಲಿ ನಡೆದಿದೆ. 

ಘಾಜಿಯಾಬಾದ್: ದಿನಸಿ ಸಾಮಾಗ್ರಿ ತರುವಂತೆ ಅಂಗಡಿಗೆ ಕಳುಹಿಸಿದರೆ, ಹೆಂಡತಿ ಕರೆತಂದು ನಿಲ್ಲಿಸಿದ ಪುತ್ರನನ್ನು ಕಂಡು ತಾಯಿಯೊಬ್ಬರೂ ಆಘಾತಕ್ಕೊಳಗಾದ ಘಟನೆ ಉತ್ತರಪ್ರದೇಶದ ಘಾಜಿಯಾಬಾದ್ ನಲ್ಲಿ ನಡೆದಿದೆ. 

ಗುಡ್ಡು (26) ವ್ಯಕ್ತಿ ವಿವಾದವಾದ ವ್ಯಕ್ತಿಯಾಗಿದ್ದಾನೆ. ದಿನಸಿ ಸಾಮಾಗ್ರಿ ತರುವಂತೆ ಪುತ್ರನನ್ನು ಅಂಗಡಿಗೆ ಕಳುಹಿಸಲಾಗಿತ್ತು. ಆದರೆ, ಆತ ಬರುವಾಗ ಹೆಂಡತಿಯೊಂದಿಗೆ ಬಂದಿದ್ದ. ಈ ವಿವಾಹವನ್ನು ನಾನು ಒಪ್ಪಿಕೊಳ್ಳುವುದಿಲ್ಲ ಎಂದು ಇದೀಗ ಯುವಕನ ತಾಯಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
 
ಎರಡು ತಿಂಗಳ ಹಿಂದೆಯೇ ಹರಿದ್ವಾರದ ಆರ್ಯ ಸಮಾಜ ಮಂದಿರದಲ್ಲಿ ವಿವಾಹವಾಗಿದ್ದೆ. ಆದರೆ, ಲಾಕ್'ಡೌನ್ ಇದ್ದ ಪರಿಣಾಮ ಪ್ರಮಾಣಪತ್ರ ಸಿಕ್ಕಿರಲಿಲ್ಲ. ಬಳಿಕ ಪತ್ನಿ ಸವಿತಾ ದೆಹಲಿಯಲ್ಲಿ ಬಾಡಿಗೆ ಮನೆಯಲ್ಲಿದ್ದಳು. ಇದೀಗ ಪತ್ನಿಯನ್ನು ಮನೆಗೆ ಕರೆತರಲು ನಿರ್ಧರಿಸಿದ್ದೆ ಎಂದು ಗುಡ್ಡು ಹೇಳಿದ್ದಾರೆ. 

ವಿವಾಹ ಹಿನ್ನೆಲೆಯಲ್ಲಿ ಜಗಳವಾಗುತ್ತಿರುವ ಪರಿಣಾಮ ಪೊಲೀಸರು ಇದೀಗ ಸವಿತಾ ನೆಲೆಯೂರಿದ್ದ ದೆಹಲಿಯ ಬಾಡಿಗೆ ಮನೆ ಮಾಲೀಕರಿಗೆ ಮನವಿ ಮಾಡಿಕೊಂಡಿದ್ದು, ದಂಪತಿಗಳು ನೆಲೆಯೂರಲು ಅವಕಾಶ ಮಾಡಿಕೊಡುವಂತೆ ತಿಳಿಸಿದ್ದಾರೆಂದು ತಿಳಿದುಬಂದಿದೆ. 

Related Stories

No stories found.

Advertisement

X
Kannada Prabha
www.kannadaprabha.com