ತಿರುಮಲ ತಿರುಪತಿ ದೇವಸ್ಥಾನದ ಅರ್ಚಕ ಕೊರೋನಾಗೆ ಬಲಿ

ತಿರುಮಲ ತಿರುಪತಿ ದೇವಸ್ಥಾನದ 48 ವರ್ಷದ ಅರ್ಚಕರೊಬ್ಬರು ಕೋವಿಡ್-19 ಮತ್ತು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ತಿರುಪತಿ
ತಿರುಪತಿ

ತಿರುಮಲ: ತಿರುಮಲ ತಿರುಪತಿ ದೇವಸ್ಥಾನದ 48 ವರ್ಷದ ಅರ್ಚಕರೊಬ್ಬರು ಕೋವಿಡ್-19 ಮತ್ತು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಮೃತ ಅರ್ಚಕ ಇಲ್ಲಿನ ಶ್ರೀ ವೆಂಕಟೇಶ್ವರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಎಸ್‌ವಿಐಎಂಎಸ್) ಆಸ್ಪತ್ರೆಯ ಶ್ರೀ ಪದ್ಮಾವತಿ ಕೋವಿಡ್ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 

ಮೃತರು ಮಧುಮೇಹ, ಬೊಜ್ಜು ಸಮಸ್ಯೆಯಿಂದ ಬಳಲುತ್ತಿದ್ದರು. ಕೆಲ ದಿನಗಳ ಹಿಂದೆ ಉಸಿರಾಟದ ತೊಂದರೆಯ ನಂತರ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಐಸಿಯುನಲ್ಲಿ ಶೇ 88ರಷ್ಟು ಆಮ್ಲಜನಕ ನೆರವಿನಿಂದಲೇ ಅವರು ಉಸಿರಾಡುತ್ತಿದ್ದರು. 

ಉತ್ತಮ ಮೇಲ್ವಿಚಾರಣೆಗಾಗಿ ಅವರನ್ನು ಐಸಿಯುಗೆ ಸ್ಥಳಾಂತರಿಸಲಾಗಿತ್ತು. ಆದರೂ ಅವರು ಚಿಕಿತ್ಸೆಗೆ ಸ್ಪಂದಿಸದೆ ಗುರುವಾರ ಸಂಜೆ 4 ಗಂಟೆಗೆ ಸಾವನ್ನಪ್ಪಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com