ಬುಂದೇಲ್ ಖಂಡ್ ಎಕ್ಸ್ ಪ್ರೆಸ್ ವೇ ಗಾಗಿ 1.89 ಲಕ್ಷ ಮರಗಳ ಮಾರಣ ಹೋಮ!  

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್

ಬಾಂಡಾ: ಬುಂದೇಲ್ ಖಂಡ್ ಎಕ್ಸ್ ಪ್ರೆಸ್ ವೇ ಗಾಗಿ 1.89 ಲಕ್ಷ ಮರಗಳನ್ನು ಉತ್ತರ ಪ್ರದೇಶದ ಅಧಿಕಾರಿಗಳು ಕಡಿದು ಹಾಕಿದ್ದಾರೆ.

ಕುಲ್ದೀಪ್ ಶುಕ್ಲಾ ಸಲ್ಲಿಸಿದ್ದ ಆರ್ ಟಿಐ ಗೆ ಉತ್ತರ ಪ್ರದೇಶ ಅರಣ್ಯ ಇಲಾಖೆಯ ಹಿರಿಯ ವ್ಯವಸ್ಥಾಪಕ ಅತುಲ್ ಆಸ್ತಾನ ಎಕ್ಸ್ ಪ್ರೆಸ್ ವೇ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರ (ಯುಪಿಇಐಡಿಎ) 296 ಕಿ.ಮೀ ಉದ್ದದ ಯೋಜನೆಗಾಗಿ 1,89,036 ಮರಗಳನ್ನು ತೆರವುಗೊಳಿಸಿದೆ ಎಂದು ಹೇಳಿದ್ದಾರೆ.

ಬಾಂದಾ, ಚಿತ್ರಕೂಟ್, ಮಹೋಬ್, ಹಮೀರ್ ಪುರ್, ಜಲೌನ್, ಔರೈಯಾ ಹಾಗೂ ಇಟಾವಾಗಳಲ್ಲಿ ಮರಗಳನ್ನು ಕಡಿಯಲಾಗಿದೆ.

ಮರಗಳನ್ನು ಕಡಿದಿರುವುದಕ್ಕೆ ಪರ್ಯಾಯವಾಗಿ 2.70 ಲಕ್ಷ ಗಿಡಗಳನ್ನು ಎಕ್ಸ್ ಪ್ರೆಸ್ ವೇ ಇಕ್ಕೆಲಗಳಲ್ಲಿ ನೆಡುವುದಾಗಿ ಆರ್ ಟಿಐ ಮಾಹಿತಿಯಲ್ಲಿ ತಿಳಿಸಲಾಗಿದೆ. ಕೇಂದ್ರದ ಅನುಮತಿಯೊಂದಿಗೆ ಮರಗಳನ್ನು ಕತ್ತಿರಿಸಲಾಗಿದೆ ಎಂದು ಆರ್ ಟಿಐ ಮಾಹಿತಿಯಲ್ಲಿ ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com