ಚೀನಾದಿಂದ 3 ಭಾರತೀಯ ಯೋಧರ ಹತ್ಯೆ: ತುರ್ತು ಸುದ್ದಿಗೋಷ್ಠಿ ಕರೆದ ಭಾರತೀಯ ಸೇನೆ!

ಪೂರ್ವ ಲಡಾಖ್ ನಲ್ಲಿ ಕಳೆದ ರಾತ್ರಿ ನಡೆದ ಚೀನಾ ಮತ್ತು ಭಾರತೀಯ ಯೋಧರ ಸಂಘರ್ಷದಲ್ಲಿ ಮೂವರು ಭಾರತೀಯ ಯೋಧರು ಮೃತಪಟ್ಟಿದ್ದು ಈ ಸಂಬಂಧ ಭಾರತೀಯ ಸೇನೆ ದಿಢೀರ್ ತುರ್ತು ಸುದ್ಧಿಗೋಷ್ಠಿ ಕರೆದಿದೆ.
ಬಿಪಿನ್ ರಾವತ್
ಬಿಪಿನ್ ರಾವತ್

ನವದೆಹಲಿ: ಪೂರ್ವ ಲಡಾಖ್ ನಲ್ಲಿ ಕಳೆದ ರಾತ್ರಿ ನಡೆದ ಚೀನಾ ಮತ್ತು ಭಾರತೀಯ ಯೋಧರ ಸಂಘರ್ಷದಲ್ಲಿ ಮೂವರು ಭಾರತೀಯ ಯೋಧರು ಮೃತಪಟ್ಟಿದ್ದು ಈ ಸಂಬಂಧ ಭಾರತೀಯ ಸೇನೆ ದಿಢೀರ್ ತುರ್ತು ಸುದ್ಧಿಗೋಷ್ಠಿ ಕರೆದಿದೆ. 

ಗಾಲ್ವಾನ್ ಕಣಿವೆಯಲ್ಲಿ ಕಳೆದ ರಾತ್ರಿ ಚೀನಾ ಸೈನಿಕರು ಅತಿಕ್ರಮ ಪ್ರವೇಶ ಮಾಡಿದ್ದರು. ಈ ವೇಳೆ ಭಾರತೀಯ ಸೇನೆ ಹಿಂದೆ ಸರಿಯುವಂತೆ ಎಚ್ಚರಿಕೆ ನೀಡಿದ್ದರು. ಆದರೆ ಚೀನಾ ಸೈನಿಕರು ಹಿಂದೆ ಸರಿಯದಿದ್ದರಿಂದ ಉಭಯ ಸೇನೆಯ ನಡುವೆ ಸಂಘರ್ಷ ನಡೆದಿತ್ತು. 

ಚೀನಾ ಮತ್ತು ಭಾರತೀಯ ಯೋಧರು ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಮೂವರು ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಓರ್ವ ಕರ್ನಲ್, ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. 

ಗಡಿಯಲ್ಲಿ ಪರಿಸ್ಥಿತಿ ಉಲ್ಭಣಗೊಳ್ಳುತ್ತಿದ್ದಂತೆ ಭಾರತೀಯ ಸೇನೆ ತುರ್ತು ಸುದ್ದಿಗೋಷ್ಠಿ ಕರೆದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com