ಚೀನಾದಿಂದ 3 ಭಾರತೀಯ ಯೋಧರ ಹತ್ಯೆ: ತುರ್ತು ಸುದ್ದಿಗೋಷ್ಠಿ ಕರೆದ ಭಾರತೀಯ ಸೇನೆ!

ಪೂರ್ವ ಲಡಾಖ್ ನಲ್ಲಿ ಕಳೆದ ರಾತ್ರಿ ನಡೆದ ಚೀನಾ ಮತ್ತು ಭಾರತೀಯ ಯೋಧರ ಸಂಘರ್ಷದಲ್ಲಿ ಮೂವರು ಭಾರತೀಯ ಯೋಧರು ಮೃತಪಟ್ಟಿದ್ದು ಈ ಸಂಬಂಧ ಭಾರತೀಯ ಸೇನೆ ದಿಢೀರ್ ತುರ್ತು ಸುದ್ಧಿಗೋಷ್ಠಿ ಕರೆದಿದೆ.
ಬಿಪಿನ್ ರಾವತ್
ಬಿಪಿನ್ ರಾವತ್
Updated on

ನವದೆಹಲಿ: ಪೂರ್ವ ಲಡಾಖ್ ನಲ್ಲಿ ಕಳೆದ ರಾತ್ರಿ ನಡೆದ ಚೀನಾ ಮತ್ತು ಭಾರತೀಯ ಯೋಧರ ಸಂಘರ್ಷದಲ್ಲಿ ಮೂವರು ಭಾರತೀಯ ಯೋಧರು ಮೃತಪಟ್ಟಿದ್ದು ಈ ಸಂಬಂಧ ಭಾರತೀಯ ಸೇನೆ ದಿಢೀರ್ ತುರ್ತು ಸುದ್ಧಿಗೋಷ್ಠಿ ಕರೆದಿದೆ. 

ಗಾಲ್ವಾನ್ ಕಣಿವೆಯಲ್ಲಿ ಕಳೆದ ರಾತ್ರಿ ಚೀನಾ ಸೈನಿಕರು ಅತಿಕ್ರಮ ಪ್ರವೇಶ ಮಾಡಿದ್ದರು. ಈ ವೇಳೆ ಭಾರತೀಯ ಸೇನೆ ಹಿಂದೆ ಸರಿಯುವಂತೆ ಎಚ್ಚರಿಕೆ ನೀಡಿದ್ದರು. ಆದರೆ ಚೀನಾ ಸೈನಿಕರು ಹಿಂದೆ ಸರಿಯದಿದ್ದರಿಂದ ಉಭಯ ಸೇನೆಯ ನಡುವೆ ಸಂಘರ್ಷ ನಡೆದಿತ್ತು. 

ಚೀನಾ ಮತ್ತು ಭಾರತೀಯ ಯೋಧರು ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಮೂವರು ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಓರ್ವ ಕರ್ನಲ್, ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. 

ಗಡಿಯಲ್ಲಿ ಪರಿಸ್ಥಿತಿ ಉಲ್ಭಣಗೊಳ್ಳುತ್ತಿದ್ದಂತೆ ಭಾರತೀಯ ಸೇನೆ ತುರ್ತು ಸುದ್ದಿಗೋಷ್ಠಿ ಕರೆದಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com