ಹುತಾತ್ಮನಾದ ವಾರ್ತೆಯಿಂದ ಶೋಕದಲ್ಲಿ ಮುಳುಗಿತ್ತು ಯೋಧನ ಕುಟುಂಬ, ಮರುಘಳಿಗೆ ಮಗನಿಂದಲೇ ಬಂತು ಕರೆ!

ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಗ ಲಡಾಕ್ ನಲ್ಲಿ ಮೃತಪಟ್ಟಿದ್ದಾನೆ ಎಂಬ ಸುದ್ದಿ ತಿಳಿದ ಯೋಧ ಸುನಿಲ್ ರೈ ನ ಕುಟುಂಬ ಸದಸ್ಯರು ಅತೀವ ಸಂಕಟದಲ್ಲಿದ್ದರು.
ಹುತಾತ್ಮನಾದ ವಾರ್ತೆಯಿಂದ ಶೋಕದಲ್ಲಿ ಮುಳುಗಿತ್ತು ಯೋಧನ ಕುಟುಂಬ, ಮರುಘಳಿಗೆ ಮಗನಿಂದಲೇ ಬಂತು ಕರೆ!
ಹುತಾತ್ಮನಾದ ವಾರ್ತೆಯಿಂದ ಶೋಕದಲ್ಲಿ ಮುಳುಗಿತ್ತು ಯೋಧನ ಕುಟುಂಬ, ಮರುಘಳಿಗೆ ಮಗನಿಂದಲೇ ಬಂತು ಕರೆ!
Updated on

ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಗ ಲಡಾಕ್ ನಲ್ಲಿ ಮೃತಪಟ್ಟಿದ್ದಾನೆ ಎಂಬ ಸುದ್ದಿ ತಿಳಿದ ಯೋಧ ಸುನಿಲ್ ರೈ ನ ಕುಟುಂಬ ಸದಸ್ಯರು ಅತೀವ ಸಂಕಟದಲ್ಲಿದ್ದರು. ಆದರೆ ಈ ಸುದ್ದಿ ಬಂದ ಕೆಲವೇ  ಘಳಿಗೆಯಲ್ಲಿ ಸ್ವತಃ ಯೋಧ ಸುನಿಲ್ ರೈ ಮನೆಗೆ ಕರೆ ಮಾಡಿದ್ದು ಆ ಕುಟುಂಬದ ಸಂತಸಕ್ಕೆ ಪಾರವೇ ಇರಲಿಲ್ಲ!

ಗಲ್ವಾನ್ ಕಣಿವೆಯಲ್ಲಿ ಚೀನಾ-ಭಾರತದ ಸೇನಾಪಡೆಗಳ ನಡುವೆ ನಡೆದ ಘರ್ಷಣೆಯಲ್ಲಿ ಮೃತಪಟ್ಟಿದ್ದು ಪಾಟ್ನಾದ ಸುನಿಲ್ ಕುಮಾರ್ ಆದರೆ ಗೊಂದಲ, ತಪ್ಪು ಮಾಹಿತಿಗಳಿಂದಾಗಿ ಬಿಹಾರದ ಸರಣ್ ಜಿಲ್ಲೆಯ ದಿಘ್ರಾ-ಪರ್ಸ ಗ್ರಾಮದಲ್ಲಿರುವ ಸುನಿಲ್ ರೈ ಅವರ ಕುಟುಂಬಕ್ಕೆ ಯೋಧ ಹುತಾತ್ಮ ವಾರ್ತೆ ತಲುಪಿತ್ತು. ಹುತಾತ್ಮರಾದ ಯೋಧ ಹಾಗೂ ವಾರ್ತೆ ತಲುಪಿದ ಮನೆಯ ಯೋಧ ಇಬ್ಬರ ಹೆಸರೂ ಒಂದೇ ಆಗಿದ್ದರಿಂದ ಈ ಅಚಾತುರ್ಯ ಸಂಭವಿಸಿದೆ.

ಸುನಿಲ್ ರೈ ತಮ್ಮ ಮರಣ ವಾರ್ತೆ ಪ್ರಕಟಗೊಂಡಿರುವುದನ್ನು ತಾವೇ ಆನ್ ಲೈನ್ ಮೂಲಕ ನೋಡಿ ಕುಟುಂಬ ಸದಸ್ಯರಿಗೆ ಕರೆ ಮಾಡಿದ್ದು ತಮಗೆ ಸಂಬಂಧಿಸಿದಂತೆ ಆ ಸುದ್ದಿ ಸುಳ್ಳು ಎಂಬುದನ್ನು ತಿಳಿಸಿದ್ದಾರೆ. ಇದೇ ತಪ್ಪು ಮಾಹಿತಿ ಎಲ್ಲೆಡೆಯೂ ಪ್ರಕಟವಾಗಿದ್ದು, ಪ್ರಮುಖ ದೈನಿಕಗಳು, ರಾಜ್ಯಪಾಲರು, ಮುಖ್ಯಮಂತ್ರಿಗಳು ಹಾಗೂ ಇತರ ರಾಜಕಾರಣಿಗಳು ಸಹ ಸಂತಾಪ ಸೂಚಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com