ಮಾಜಿ ಸಂಸದ ಕೆ.ಅರ್ಜುನನ್ ದರ್ಪ: ಕರ್ತವ್ಯ ನಿರತ ಪೊಲೀಸ್ ಅಧಿಕಾರಿಗೆ ಕಾಲಿನಿಂದ ಒದ್ದು ದೌರ್ಜನ್ಯ

ತಮಿಳುನಾಡಿನ ಡಿಎಂಕೆ ಮಾಜಿ ಸಂಸದ ಕೆ.ಅರ್ಜುನನ್ ಕರ್ತವ್ಯ ನಿರತ ಪೊಲೀಸ್‌ ಅಧಿಕಾರಿಗೆ ಕಾಲಿನಿಂದ ಒದ್ದಿದ್ದಾರೆ. ಭಾನುವಾರ ರಾತ್ರಿ ಸೇಲಮ್‌ನ ಚೆಕ್‌ಪೋಸ್ಟ್‌ನಲ್ಲಿ ಈ ಘಟನೆ ನಡೆದಿದೆ.
ಕೆ. ಅರ್ಜುನನ್
ಕೆ. ಅರ್ಜುನನ್

ಸೇಲಂ: ತಮಿಳುನಾಡಿನ ಡಿಎಂಕೆ ಮಾಜಿ ಸಂಸದ ಕೆ.ಅರ್ಜುನನ್ ಕರ್ತವ್ಯ ನಿರತ ಪೊಲೀಸ್‌ ಅಧಿಕಾರಿಗೆ ಕಾಲಿನಿಂದ ಒದ್ದಿದ್ದಾರೆ. ಭಾನುವಾರ ರಾತ್ರಿ ಸೇಲಮ್‌ನ ಚೆಕ್‌ಪೋಸ್ಟ್‌ನಲ್ಲಿ ಈ ಘಟನೆ ನಡೆದಿದೆ.

ತಮಿಳುನಾಡಿನಲ್ಲಿ ಕೊರೊನಾ ವೈರಸ್‌ ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಅಲ್ಲಿನ ಕೆಲ ಜಿಲ್ಲೆಗಳಲ್ಲಿ ಸಂಪೂರ್ಣ ಲಾಕ್‌ಡೌನ್‌ ಜಾರಿಗೊಳಿಸಲಾಗಿದೆ. ಈ ಮಧ್ಯೆ ಕಾರಿನಲ್ಲಿ ಬಂದ ಅರ್ಜುನನ್‌ ಅವರ ಬಳಿ ಪೊಲೀಸರು ಲಾಕ್‌ಡೌನ್‌ ಇ–ಪಾಸ್‌ ಕೇಳಿದ್ದಾರೆ.

ಆಗ ಪೊಲೀಸ್‌ ಅಧಿಕಾರಿ ಮತ್ತು ಅರ್ಜುನನ್‌ ನಡುವೆ ವಾಗ್ವಾದ ನಡೆದಿದೆ. ಆಗ ಅರ್ಜುನನ್‌ ಪೊಲೀಸ್‌ ಅಧಿಕಾರಿಯನ್ನು ಕುತ್ತಿಗೆ ಹಿಡಿದು ತಳ್ಳಿದ್ದಾರೆ. ಇದರಿಂದ ಕೋಪಗೊಂಡ ಪೊಲೀಸ್‌ ಅಧಿಕಾರಿಯೂ ಅರ್ಜುನನ್‌ ಅವರನ್ನು ತಳ್ಳಿದ್ದಾರೆ. ಆಗ ಅರ್ಜುನನ್‌ ಅಧಿಕಾರಿಗೆ ಕಾಲಿನಿಂದ ಒದ್ದಿದ್ದಾರೆ. ಈ ಇಡೀ ಘಟನೆಯನ್ನು ಅಲ್ಲೇ ಇದ್ದವರು ವಿಡಿಯೊ ಮಾಡಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com