ಉತ್ತರ ಪ್ರದೇಶ: ಇಂತಹ ಅಪಘಾತಗಳು ಸಾವುಗಳಲ್ಲ, ಕೊಲೆಗಳು- ಅಖಿಲೇಶ್ ಯಾದವ್

ಉತ್ತರ ಪ್ರದೇಶದ  ಔರೈಯಾದಲ್ಲಿ ನಡೆದ ಸಂಭವಿಸಿದ ಭೀಕರ ಅಪಘಾತದಲ್ಲಿ 24 ವಲಸೆ ಕಾರ್ಮಿಕರು ಮೃತಪಟ್ಟಿರುವ ಬಗ್ಗೆ ತೀವ್ರ ದು:ಖ ವ್ಯಕ್ತಪಡಿಸಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಇಂತಹ ಅಪಘಾತಗಳು ಸಾವುಗಳಲ್ಲ, ಕೊಲೆ ಎಂದಿದ್ದಾರೆ.
ಅಪಘಾತ, ಅಖಿಲೇಶ್ ಯಾದವ್ ಚಿತ್ರ
ಅಪಘಾತ, ಅಖಿಲೇಶ್ ಯಾದವ್ ಚಿತ್ರ
Updated on

ಲಖನೌ: ಉತ್ತರ ಪ್ರದೇಶದ  ಔರೈಯಾದಲ್ಲಿ ನಡೆದ ಸಂಭವಿಸಿದ ಭೀಕರ ಅಪಘಾತದಲ್ಲಿ 24 ವಲಸೆ ಕಾರ್ಮಿಕರು ಮೃತಪಟ್ಟಿರುವ ಬಗ್ಗೆ ತೀವ್ರ ದು:ಖ ವ್ಯಕ್ತಪಡಿಸಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಇಂತಹ ಅಪಘಾತಗಳು ಸಾವುಗಳಲ್ಲ, ಕೊಲೆ ಎಂದಿದ್ದಾರೆ.

ವಲಸೆ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಟ್ರಕ್ ಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ 24 ಮಂದಿ ಮೃತಪಟ್ಟಿದ್ದು, 36 ಜನರು ಗಂಬೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಲಸಿಗರ ಕಾರ್ಮಿಕರ ಸಾವಿನ ಬಗ್ಗೆ ತೀವ್ರ  ನೋವಾಗುತ್ತಿದೆ. ಗಾಯಾಳುಗಳು ಬೇಗನೆ ಚೇತರಿಸಿಕೊಳ್ಲಲಿ. ಎಲ್ಲ ಗೊತ್ತಿದ್ದರೂ  ಹೃದಯ ಹೀನ ಜನರು ಹಾಗೂ ಅವರ ಬೆಂಬಲಿಗರು ನಿರ್ಲಕ್ಷ್ಯದ ಬಗ್ಗೆ ಮೌನ ವಹಿಸಿದ್ದಾರೆ. ಇಂತಹ ಅಪಘಾತಗಳು ಸಾವುಗಳಲ್ಲ, ಕೊಲೆಗಳು ಎಂದು ಅಖಿಲೇಶ್ ಯಾದವ್ ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com