'ನಾನು ಅದೃಷ್ಟವಂತೆ, ರಾಜ್ಯಪಾಲರು ತನ್ನ ಸ್ವಂತ ಮಗಳಂತೆ ನನ್ನ ಮಾತುಗಳನ್ನು ಆಲಿಸಿದರು- ಕಂಗನಾ ರಣಾವತ್ 

ಕೆಲ ದಿನಗಳಿಂದ ಭಾರೀ ಪ್ರಚಾರದಲ್ಲಿರುವ ಬಾಲಿವುಡ್ ನಟಿ ಕಂಗನಾ ರಣಾವತ್  ಹಾಗೂ ಆಕೆಯ ಸಹೋದರಿ ಇಂದು ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶಿಯಾರಿ ಅವರನ್ನು ರಾಜಭವನದಲ್ಲಿಂದು ಭೇಟಿಯಾದರು.
ಕಂಗನಾ, ಮಹಾರಾಷ್ಟ್ರ ರಾಜ್ಯಪಾಲರ ಭೇಟಿ
ಕಂಗನಾ, ಮಹಾರಾಷ್ಟ್ರ ರಾಜ್ಯಪಾಲರ ಭೇಟಿ
Updated on

ಮುಂಬೈ: ಕೆಲ ದಿನಗಳಿಂದ ಭಾರೀ ಪ್ರಚಾರದಲ್ಲಿರುವ ಬಾಲಿವುಡ್ ನಟಿ ಕಂಗನಾ ರಣಾವತ್  ಹಾಗೂ ಆಕೆಯ ಸಹೋದರಿ ಇಂದು ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶಿಯಾರಿ ಅವರನ್ನು ರಾಜಭವನದಲ್ಲಿಂದು ಭೇಟಿಯಾದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಂಗನಾ, ಅನ್ಯಾಯಯುತವಾದ ವರ್ತನೆ ಬಗ್ಗೆ ರಾಜ್ಯಪಾಲರಿಗೆ ಹೇಳಿದ್ದೇನೆ. ನ್ಯಾಯ ದೊರೆಯುವ ವಿಶ್ವಾಸವಿದೆ. ಆದ್ದರಿಂದ ವ್ಯವಸ್ಥೆಯಲ್ಲಿ ಯುವತಿಯರು ಸೇರಿದಂತೆ ಎಲ್ಲಾ ನಾಗರಿಕರ ನಂಬಿಕೆ ಮರು ಕಳಿಸಲಿದೆ ಎಂದರು.

ನಾನು ಅದೃಷ್ಟವಂತೆ, ರಾಜ್ಯಪಾಲರು ತಮ್ಮ ಸ್ವಂತ ಮಗಳನಂತೆ ನನ್ನ ಮಾತುಗಳನ್ನು ಆಲಿಸಿದರು ಎಂದು ಕಂಗನಾ ರಣಾವತ್ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com