ಜೈಪುರ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಮಸೂದೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ತೀವ್ರಗೊಂಡಿದ್ದು, ರಾಜಸ್ಥಾನ-ಹರ್ಯಾಣ ಗಡಿ ಭಾಗದ ರೈತರು ದೆಹಲಿ-ಜೈಪುರ್ ಹೆದ್ದಾರಿಯಲ್ಲಿ ಜಾಮ್ ಉಂಟಾಗಿತ್ತು.
ಅಖಿಲ ಭಾರತ ಕಿಸಾನ್ ಸಂಘರ್ಷ್ ಕೋಆರ್ಡಿನೇಷನ್ ಸಮಿತಿಯ ಕರೆಯ ಹಿನ್ನೆಲೆಯಲ್ಲಿ ರಾಜಸ್ಥಾನ ಹಾಗೂ ಹರ್ಯಾಣದ ವಿವಿಧ ರೈತ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು,
ಎರಡೂ ರಾಜ್ಯಗಳಿಂದ ಬಂದಿದ್ದ ರೈತರು ಶಾಜಾನ್ಪುರ್ ದಲ್ಲಿ ಸೇರಿ ಮುಂದಿನ ಯೋಜನೆಯನ್ನು ಚರ್ಚಿಸಿದ್ದಾರೆ. ಈ ಹೆದ್ದಾರಿ ತಡೆ ದೆಹಲಿಯ ಗಡಿ ಭಾಗದಲ್ಲಿ 17 ದಿನಗಳಿಂದ ರೈತರು ನಡೆಸುತ್ತಿದ್ದ ಪ್ರತಿಭಟನೆಯ ಭಾಗವಾಗಿದೆ.
Advertisement