ನವದೆಹಲಿ: ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಮರುಳೀಧರ್ ವರ್ಗಾವಣೆ ನಾಚಿಕೆಗೇಡುತನ ಹಾಗೂ ಬೇಸರದ ಸಂಗತಿ ಎಂದು ಕಾಂಗ್ರೆಸ್ ಹೇಳಿದೆ.
ಈ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, ನ್ಯಾಯಮೂರ್ತಿ ಮುರಳೀದರ್ ಅವರ ರಾತ್ರೋರಾತ್ರಿ ವರ್ಗಾವಣೆ ಅಘಾತಕಾರಿಯಷ್ಟೇ ಅಲ್ಲದೆ, ದುಃಖಕರ ಹಾಗೂ ನಾಚಿಕೆಗೇಡಿನ ವಿಚಾರ ಎಂದು ಹೇಳಿದ್ದಾರೆ.
ಲಕ್ಷಾಂತರ ಭಾರತೀಯರು ನ್ಯಾಯಾಂಗದಲ್ಲಿ ಅಘಾದ ನಂಬಿಕೆಯನ್ನಿಟ್ಟಿದ್ದಾರೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ಮೂಗು ತೂರಿಸುವುದು ಹಾಗೂ ಜನರ ನಂಬಿಕೆಯನ್ನು ಮುರಿಯುವ ಸರ್ಕಾರ ಯತ್ನಗಳು ಶೋಚನೀಯ ಎಂದು ತಿಳಿಸಿದ್ದಾರೆ.
Advertisement