ದೆಹಲಿಯಲ್ಲಿ ಭರ್ಜರಿ ಗೆಲುವಿನ ಹಿನ್ನೆಲೆ, ಉತ್ತರಾಖಂಡ್ ವಿಧಾನಸಭೆಯತ್ತ ಕಣ್ಣಿಟ್ಟ ಎಎಪಿ 

 ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿ ಗೆಲುವಿನ ಗುಂಗಿನಲ್ಲಿರುವ ಆಮ್ ಆದ್ಮಿ ಪಕ್ಷ (ಎಎಪಿ) 2022 ರ  ಉತ್ತರಾಖಂಡ್ ರಾಜ್ಯ ವಿಧಾನಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿದೆ. ಇದಕ್ಕಾಗಿ ಪಕ್ಷವು ಆ ರಾಜ್ಯದಲ್ಲಿ ನೂತನ ರಾಜ್ಯ ಘಟಕವನ್ನು ಘೋಷಿಸಿದೆ.
ದೆಹಲಿಯಲ್ಲಿ ಭರ್ಜರಿ ಗೆಲುವಿನ ಹಿನ್ನೆಲೆ, ಉತ್ತರಾಖಂಡ್ ವಿಧಾನಸಭೆಯತ್ತ ಕಣ್ಣಿಟ್ಟ ಎಎಪಿ 

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿ ಗೆಲುವಿನ ಗುಂಗಿನಲ್ಲಿರುವ ಆಮ್ ಆದ್ಮಿ ಪಕ್ಷ (ಎಎಪಿ) 2022 ರ  ಉತ್ತರಾಖಂಡ್ ರಾಜ್ಯ ವಿಧಾನಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿದೆ. ಇದಕ್ಕಾಗಿ ಪಕ್ಷವು ಆ ರಾಜ್ಯದಲ್ಲಿ ನೂತನ ರಾಜ್ಯ ಘಟಕವನ್ನು ಘೋಷಿಸಿದೆ.

ದೆಹಲಿಯ ಸಂಗಮ್ ವಿಹಾರದ ಶಾಸಕ ದಿನೇಶ್ ಮೋಹನಿಯಾ ಅವರನ್ನು ಉತ್ತರಾಖಂಡ ಘಟಕದ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.

"ನಾವು ದೆಹಲಿಯ ಜನರಿಗಾಗಿ ಮಾಡಿದಂತೆ ಉತ್ತರಾಖಂಡದ ಜನರಿಗೆ ಪ್ರಾಮಾಣಿಕತೆ ಮತ್ತು ಸಮರ್ಪಣಾ ಮನೋಭಾವದಿಂದ  ಕೆಲಸ ಮಾಡುವ ಗುರಿ ಹೊಂದಿದ್ದೇವೆ. ಉತ್ತರಾಖಂಡದಲ್ಲಿ ಭ್ರಷ್ಟಾಚಾರವನ್ನು ನಿಲ್ಲಿಸುವುದಾಗಿ ಮತ್ತು ವಿದ್ಯುತ್, ನೀರು, ಆರೋಗ್ಯ ಮತ್ತು ಶಿಕ್ಷಣದಂತಹ ಎಲ್ಲ ಅಗತ್ಯ ಸೌಲಭ್ಯಗಳನ್ನು ಜನರಿಗೆ ಒದಗಿಸುವುದಾಗಿ ನಾವು ಭರವಸೆ ನೀಡುತ್ತೇವೆ ”ಎಂದು ದೆಹಲಿಯಿಂದ ದೂರವಾಣಿಯಲ್ಲಿ ಮಾತನಾಡಿದ ಮೋಹನಿಯಾ ಹೇಳಿದರು.

ಸದಸ್ಯತ್ವ ನೊಂದಾವಣೆಗಾಗಿ ಮಿಸ್ಡ್ ಕಾಲ್ ಅಭಿಯಾನ ಪ್ರಾರಂಭಿಸಿರುವ ಆಮ್ ಆದ್ಮಿ ಪಕ್ಷಕ್ಕೆ  "ಲಕ್ಷಾಂತರ ಮಿಸ್ಡ್ ಕಾಲ್ ನೊಂದಿಗೆ ನಾವು ಹೆಚ್ಚಿನ ಪ್ರತಿಕ್ರಿಯೆಯನ್ನು ಸ್ವೀಕರಿಸಿದ್ದೇವೆ ಮತ್ತು ಉತ್ತರಾಖಂಡದಲ್ಲಿ ಸರ್ಕಾರ ರಚಿಸಲು ಜನರು ನಮ್ಮನ್ನು ನಂಬುತ್ತಾರೆ" ಎಂದು ಅವರು ಹೇಳಿದ್ದಾರೆ.

ಇನ್ನೊಂದೆಡೆ ಉತ್ತರಾಖಂಡ್ ನಲ್ಲಿ ಎಎಪಿ ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳ ಮತಗಳ ಪ್ರಮಾಣ ತಗ್ಗುವಂತೆ ಮಾಡಲಿದೆ ಎಂದು ತಜ್ಞರು  ಅಭಿಪ್ರಾಯಪಟ್ತರು. ಡೆಹ್ರಾಡೂನ್‌ನ ರಾಜಕೀಯ ನಿರೂಪಕ ಆದೀರ್ ಯಾದವ್, “ದೆಹಲಿಯಲ್ಲಿ ಎಎಪಿ ಕಾರ್ಯಕ್ಕೆ ಇಡೀ ರಾಷ್ಟ್ರದ ಜನರು ಸಾಕ್ಷಿಯಾಗಿದ್ದಾರೆ. ಇದು ಪಕ್ಷಕ್ಕೆ ವಿಶ್ವಾಸಾರ್ಹತೆಯನ್ನು ಸೃಷ್ಟಿಸಿದೆ, ಅದು ಮತಗಳನ್ನಾಗಿ ಪರಿವರ್ತಿಸಬಹುದುಆ ಮತಗಳು ಬಿಜೆಪಿ ಮತ್ತು ಕಾಂಗ್ರೆಸ್  ಮತದಾರರಿಂದ ಬರಲಿದೆ" ಎಂದರು.

ಆದರೆ, ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷದ ನಾಯಕರು ರಾಜ್ಯದಲ್ಲಿ ಎಎಪಿಗೆ ಉತ್ತಮ ಸ್ಥಾನ ಬರುವುದನ್ನು ತಳ್ಳಿ ಹಾಕಿದ್ದಾರೆ.

2014 ರ ಸಾರ್ವತ್ರಿಕ ಚುನಾವಣೆಯ ನಂತರ, ಪಕ್ಷವು ಹಿಮಾಲಯದ ತಪ್ಪಲ ರಾಜ್ಯದಲ್ಲಿ ಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವುದು ಇದೇ ಮೊದಲ ಬಾರಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com