ಕೊರೋನಾಗೆ ಔಷಧಿ ಕಂಡುಹಿಡಿದು, ಅದನ್ನು ತಾನೇ ಸೇವಿಸಿ ಚೆನ್ನೈ ಬಯೋಟೆಕ್ ಸಂಸ್ಥೆಯ ಜಿಎಂಸಾವು!

ತಮಿಳುನಾಡಿನಲ್ಲಿ ಶುಕ್ರವಾರ ಆಘಾತಕಾರಿ ಘಟನೆಯೊಂದು ನಡೆದಿದ್ದು, ಚೆನ್ನೈ ಮೂಲದ ಬಯೋಟೆಕ್ ಸಂಸ್ಥೆಯೊಂದರ ಜನರಲ್ ಮ್ಯಾನೆಜರ್ ಶಿವನೇಶನ್ ಅವರು, ಮಹಾಮಾರಿ ಕೊರೋನಾ ವೈರಸ್ ಗೆ ಔಷಧಿ ಕಂಡುಹಿಡಿದು, ಅದನ್ನು ತಾನೇ ಸೇವಿಸಿ ಮೃತಪಟ್ಟಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚೆನ್ನೈ: ತಮಿಳುನಾಡಿನಲ್ಲಿ ಶುಕ್ರವಾರ ಆಘಾತಕಾರಿ ಘಟನೆಯೊಂದು ನಡೆದಿದ್ದು, ಚೆನ್ನೈ ಮೂಲದ ಬಯೋಟೆಕ್ ಸಂಸ್ಥೆಯೊಂದರ ಜನರಲ್ ಮ್ಯಾನೆಜರ್ ಶಿವನೇಶನ್ ಅವರು, ಮಹಾಮಾರಿ ಕೊರೋನಾ ವೈರಸ್ ಗೆ ಔಷಧಿ ಕಂಡುಹಿಡಿದು, ಅದನ್ನು ತಾನೇ ಸೇವಿಸಿ ಮೃತಪಟ್ಟಿದ್ದಾರೆ.

ಕೊವಿಡ್-19 ಗುಣಪಡಿಸುವ ಔಷಧಿ ಸಂಶೋಧಿಸಿದಗಿಡಮೂಲಿಕೆ ಉತ್ಪನ್ನಗಳ ಸಂಸ್ಥೆ ಸುಜಾತ ಬಯೋಟೆಕ್ ಸಂಸ್ಥೆಯ 47 ವರ್ಷದ ಶಿವನೇಶನ್ ಅವರು ಔಷಧಿ ಸೇವಿಸಿದ ಕೆಲವೇ ನಿಮಿಷಗಳಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

"ಈ ಸಂಸ್ಥೆಯು ಉತ್ತರಾಖಂಡದಲ್ಲಿ ಕಾರ್ಖಾನೆಯನ್ನು ಹೊಂದಿದ್ದು, ಅಲ್ಲಿ ಶಿವನೇಶನ್ 20 ವರ್ಷಗಳಿಗೂ ಹೆಚ್ಚು ಕಾಲ ಕೆಲಸ ಮಾಡಿದ್ದರು ಮತ್ತು ನಂತರ ಚೆನ್ನೈಗೆ ತೆರಳಿ ಕೊಡಂಬಾಕ್ಕಂನ ಬೂಪತಿ ನಗರದಲ್ಲಿರುವ ಅದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು" ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಿನ್ನೆ ಬಯೋಟೆಕ್ ಸಂಸ್ಥೆಯ ಮಾಲೀಕ ಡಾ.ರಾಜ್ ಕುಮಾರ್ ಅವರ ನಿವಾಸದಲ್ಲಿ ಈ ಘಟನೆ ನಡೆದಿದ್ದು, ಈ ಔಷಧಿ ತಯಾರಿಸುವಲ್ಲಿ ವೈದ್ಯರೂ ಸಹ ಭಾಗಿಯಾಗಿದ್ದಾರೆಯೇ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com