ಇಂದು ಭಗವಾನ್ ಮಹಾವೀರ ಜಯಂತಿ: ಗಣ್ಯರಿಂದ ಶುಭಾಶಯ

ಇಂದು ಭಗವಾನ್ ಮಹಾವೀರ ಜಯಂತಿ.ಇದರ ಅಂಗವಾಗಿ ಪ್ರಧಾನಿ  ನರೇಂದ್ರ ಮೋದಿ,ರಾಷ್ಟ್ರಪತಿ ರಾಮನಾಥ್ ಕೋವಿಂದ್, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೇರಿದಂತೆ ಹಲವು ಗಣ್ಯರ ಜನತೆಗೆ ಶುಭಾಶಯ ಕೋರಿದ್ದಾರೆ.
ಮಹಾವೀರ, ಪ್ರಧಾನಿ ಮೋದಿ, ಸಿಎಂ ಯಡಿಯೂರಪ್ಪ
ಮಹಾವೀರ, ಪ್ರಧಾನಿ ಮೋದಿ, ಸಿಎಂ ಯಡಿಯೂರಪ್ಪ
Updated on

ನವದೆಹಲಿ: ಇಂದು ಭಗವಾನ್ ಮಹಾವೀರ ಜಯಂತಿ.ಇದರ ಅಂಗವಾಗಿ ಪ್ರಧಾನಿ  ನರೇಂದ್ರ ಮೋದಿ,ರಾಷ್ಟ್ರಪತಿ ರಾಮನಾಥ್ ಕೋವಿಂದ್, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೇರಿದಂತೆ ಹಲವು ಗಣ್ಯರು ಜನತೆಗೆ ಶುಭಾಶಯ ಕೋರಿದ್ದಾರೆ.

ಕೋವಿಡ್-19 ಸಾಂಕ್ರಾಮಿಕದ ವಿರುದ್ಧ ದೇಶ ಹೋರಾಡುತ್ತಿರುವ ಸಂದರ್ಭದಲ್ಲಿ, ಭಗವಾನ್  ಮಹಾವೀರ ಎಲ್ಲರನ್ನು ಆರೋಗ್ಯದಿಂದ ಇಡಲಿ ಹಾಗೂ ನಮ್ಮ ಪ್ರಯತ್ನದೊಂದಿಗೆ ಯಶಸ್ವಿಯಾಗಲು ಆಶೀರ್ವದಿಸಲಿ ಎಂದು ಪ್ರಾರ್ಥಿಸುವುದಾಗಿ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕೂಡಾ ದೇಶದ ಜನತೆಗೆ ಮಹಾವೀರ ಜಯಂತಿಯ ಶುಭಾಶಯ ಕೋರಿದ್ದು,  ಅವರ ಬೋಧನೆಗಳನ್ನು ಪಾಲಿಸುವಂತೆ ಹಾಗೂ ಸಾಮೂಹಿಕ ಶಿಸ್ತಿನ ಮೂಲಕ ಕೋವಿಡ್-19 ಸೋಲಿಸಲು ಪಣ ತೊಡುವಂತೆ ಜನರಿಗೆ ಕರೆ ನೀಡಿದ್ದಾರೆ.

ಅಧಿಕೃತ ನಿವಾಸ ಕಾವೇರಿಯಲ್ಲಿ ಭಗವಾನ್ ಮಹಾವೀರರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ನಾಡಿನ ಸಂಕಷ್ಠಗಳೆಲ್ಲಾ ದೂರಸರಿದು ಜನರಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿದರು.  ಮಹಾವೀರರ ಆಧ್ಯಾತ್ಮಿಕ ಉಪದೇಶಗಳ ಬೆಳಕು ಸದಾ ನಮಗೆ ದಾರಿ ದೀಪವಾಗಿರಲಿ ಎಂದು ಟ್ವೀಟ್ ಸಂದೇಶದಲ್ಲಿತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com