ಕಾನ್ಪುರದಲ್ಲಿ ಆಕ್ಸಿಜನ್ ಸಿಲಿಂಡರ್ ಸ್ಫೋಟ: ಕಾರ್ಮಿಕ ಸಾವು, ಇಬ್ಬರಿಗೆ ಗಂಭೀರ ಗಾಯ 

ದೇಶದಲ್ಲಿ ಕೊರೋನಾ ಸಾವು-ನೋವುಗಳ ನಡುವೆ ಉಳಿದ ಹಲವು ರೀತಿಯ ಸಮಸ್ಯೆಗಳು ಕೂಡ ಸಾಕಷ್ಟಿವೆ. ಕೊರೋನಾ ಸೋಂಕಿತ ರೋಗಿಗಳಿಗೆ ನೀಡುವ ಆಕ್ಸಿಜನ್ ಗಳನ್ನು ಘಟಕಗಳಿಂ ಸಿಲೆಂಡರ್ ಗೆ ತುಂಬಿಸುವುದು, ಅವುಗಳನ್ನು ಸಾಗಾಟ ಮಾಡುವುದು ಸಹ ಸವಾಲಿನ ಕೆಲಸ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಕಾನ್ಪುರ (ಉತ್ತರ ಪ್ರದೇಶ): ದೇಶದಲ್ಲಿ ಕೊರೋನಾ ಸಾವು-ನೋವುಗಳ ನಡುವೆ ಉಳಿದ ಹಲವು ರೀತಿಯ ಸಮಸ್ಯೆಗಳು ಕೂಡ ಸಾಕಷ್ಟಿವೆ. ಕೊರೋನಾ ಸೋಂಕಿತ ರೋಗಿಗಳಿಗೆ ನೀಡುವ ಆಕ್ಸಿಜನ್ ಗಳನ್ನು ಘಟಕಗಳಿಂ ಸಿಲೆಂಡರ್ ಗೆ ತುಂಬಿಸುವುದು, ಅವುಗಳನ್ನು ಸಾಗಾಟ ಮಾಡುವುದು ಸಹ ಸವಾಲಿನ ಕೆಲಸ.

ಇಂದು ಬೆಳಗ್ಗೆ ಉತ್ತರ ಪ್ರದೇಶದ ಕಾನ್ಪುರದಲ್ಲಿರುವ ಪಂಕಿ ಆಕ್ಸಿಜನ್ ಘಟಕದಲ್ಲಿ ಆಕ್ಸಿಜನ್ ನ್ನು ಮರು ತುಂಬಿಸುವಾಗ ಸಿಲೆಂಡರ್ ಸ್ಫೋಟವಾಗಿ ಓರ್ವ ಕಾರ್ಮಿಕ ಮೃತಪಟ್ಟು ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ದಾದಾ ನಗರ್ ಕೈಗಾರಿಕಾ ಪ್ರದೇಶದಲ್ಲಿ ನಡೆದಿರುವ ಈ ದುರ್ಘಟನೆ ಸ್ಥಳದಲ್ಲಿ ಸದ್ಯ ಪೊಲೀಸರು ಇದ್ದು ಪರಿಸ್ಥಿತಿಯ ಪರಾಮರ್ಶೆ ನಡೆಸುತ್ತಿದ್ದಾರೆ. ಹೆಚ್ಚಿನ ವಿವರ ತಿಳಿದುಬಂದಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com